i
ನಗದು ಉಡುಗೊರೆ, ಒಡವೆ ಕಳ್ಳತನ ಮಾಡಿದ್ದ ಒಂದೂವರೆ ಗಂಟೆಯೊಳಗೆ ಕಳ್ಳನನ್ನು ಬಂಧಿಸಿದ ಕೋಟೆ ನಾಡಿನ ಪೊಲೀಸರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮದುವೆಯಲ್ಲಿ ಬಂಧುಗಳು, ಸ್ನೇಹಿತರು ಉಡುಗೊರೆ ನೀಡಿದ್ದ ನಗದು, ಒಡವೆ ವಸ್ತ್ರ ಕಳವು ಮಾಡಿದ್ದ ಕಾರ್ ಚಾಲಕನನ್ನು ಒಂದೂವರೆ ಗಂಟೆಯೊಳಗೆ ಕೋಟೆ ನಾಡಿನ ಪೊಲೀಸರು ಬಂಧಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಡಿ.ಎಂ ಪ್ರಸನ್ನ ಇವರ ಸಹೋದರನ ಮಗಳ ಮದುವೆಗೆ ದಾವಣೆಗೆರೆ ಹೋಗಿ ನಂತರ ಬೆಂಗಳೂರಿನಲ್ಲಿದ್ದ ಮದುವೆ ಆರತಕ್ಷತೆಗೆ ಹೋಗಿ ಬರಲು ತಮ್ಮ ಕಾರಿಗೆ ಚಾಲಕರು ಇಲ್ಲದ ಕಾರಣ ಚಿತ್ರದುರ್ಗದ ಓಂಕಾರಿ ಎಂಬುವ ಚಾಲಕನನ್ನು ಕರೆದುಕೊಂಡು ಬೆಂಗಳೂರುಗೆ ಹೋಗಿ ವಾಪಸ್ಸು ಭೀಮಸಮುದ್ರಕ್ಕೆ ಬಂದಿದ್ದು ಮನೆಗೆ ಬಂದಾಗ ಮದುವೆ ಆರತಕ್ಷತೆಯಲ್ಲಿ ಉಡುಗೊರೆಯಾಗಿ 2.50 ಲಕ್ಷ ರೂ. ಬಂದಿದ್ದು ಅದರೊಂದಿಗೆ ಬಂಗಾರದ ಉಂಗುರ, ಬೆಳ್ಳಿ ಆಭರಣಗಳು ಕಳುವಾಗಿದ್ದವು. ಕೂಡಲೇ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಪೊಲೀಸರು ಆರೋಪಿ ಕಾರು ಚಾಲಕ ಓಂಕಾರಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕಳವು ಮಾಡಿದ್ದ ನಗದು 54800 ನಗದು, 14 ಸಾವಿರ ಮೌಲ್ಯದ 2.600 ಗ್ರಾಂ ಬಂಗಾರದ ಉಂಗುರ ಮತ್ತು ಕಳವು ಮಾಡಿದ ಹಣದದಿಂದ ಕೊಂಡಿದ್ದ 14 ಸಾವಿರ ರೂ. ಬೆಲೆ ಬಾಳುವ ರೆಡ್ಮಿ ಮೊಬೈಲ್ ನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ. ಕಳವು ಪ್ರಕರಣ ದಾಖಲಾದ ಒಂದೂವರೆ ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಪರಶುರಾಮ್ ಶ್ಲಾಘಿಸಿದ್ದಾರೆ.