i
ವಿರೋಧಿಗಳು ರಾಜಕಾರಣದಲ್ಲಿ ಮಾಡುವ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳಲ್ಲ- ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೂರು ಕೋಟೆ ವೆಚ್ಚದಲ್ಲಿ ಅಲೆಗ್ಸಾಂಡರ್ ಲೇ ಹೌಟ್ ನಲ್ಲಿ ಮೂಲಭೂತ ಸೌಲಭ್ಯ ನೀಡುವ ಮೂಲಕ ಅಭಿವೃದ್ಧಿ ಮಾಡಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಬ್ಯಾಂಕ್ ಕಾಲೋನಿಯಲ್ಲಿನ ಅಲೆಗ್ಸಾಂಡರ್ ಲೇ ಹೌಟ್ ನಲ್ಲಿ ನೂತನ ನೀರಿನ ಸಂಪೂರ್ಕ ಮತ್ತು ನೂತನ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಬೆಳವಣಿಗೆ ಆಗುತ್ತಿದ್ದು ಹಲವು ಕಡೆ ಹೊಸ ಬಡಾವಣೆಗಳು ಆಗುತ್ತಿವೆ. ಕಳೆದ ಐದು ವರ್ಷದಲ್ಲಿ ಬ್ಯಾಂಕ್ ಐದು ವರ್ಷದಲ್ಲಿ 25 ಕೋಟಿಗಿಂತ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ನೂತನ ರಸ್ತೆಗಳು, ಪಾರ್ಕ್ ಅಭಿವೃದ್ಧಿ ,ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಈ ಬಡಾವಣೆಯಲ್ಲಿ ಒಂದು ರಸ್ತೆ ಸಹ ಇರಲಿಲ್ಲ. ಆದರೆ ಈಗ ಬಹುತೇಕ ಎಲ್ಲಾ ರಸ್ತೆಗಳನ್ನು ವಿವಿಧ ಅನುದಾನದಲ್ಲಿ ಮಾಡಲಾಗಿದೆ ಎಂದರು.
ನಗರದಲ್ಲಿ ಎಲ್ಲಾ ಬಡಾವಣೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳಾದ ವಿದ್ಯಾನಗರ, ತರಳಬಾಳು ನಗರ, ಬ್ಯಾಂಕ್ ಕಾಲೋನಿ, ವೇಮನ ನಗರ, ಬಸವೇಶ್ವರ ನಗರದಲ್ಲಿ ನಗರದಲ್ಲಿ ನೂತನ ರಸ್ತೆಗಳನ್ನು ಮಾಡಲಾಗುತ್ತಿದೆ. ಇನ್ನು ಸಾಕಷ್ಟು ಹಣ ಅಭಿವೃದ್ಧಿಗೆ ಬೇಕಾಗಿದ್ದು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ.
ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ಪ್ರತಿ ಹಳ್ಳಿಯಲ್ಲಿ ಮತ್ತು ಸ್ಲಂ ಗಳಲ್ಲಿ ಸಿ.ಸಿ.ರಸ್ತೆಯನ್ನು ಮಾಡಲಾಗುತ್ತದೆ.ನೂರಕ್ಕೆ ನೂರರಷ್ಟು ಅಭಿವೃದ್ಧಿ ಮಾಡಿದ್ದು ಜನರು ನಿರೀಕ್ಷೆಗಿಂತ ಹೆಚ್ಚಿನದಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದರು.
ನೂತನ ಬಡಾವಣೆಗಳಲ್ಲಿ ಹೊಸದಾಗಿ ಲೈಟ್ ಗಳನ್ನು ಅಳವಡಿಸಲಾಗಿದೆ. ನಮ್ಮ ವಿರೋಧಿಗಳು ಅಭಿವೃದ್ಧಿ ಸಹಿಸುತ್ತಿಲ್ಲ. ನಾನು ಬಡವರ ಸೇವೆಗೆ ಸದಾ ಸಿದ್ದ ಇರುತ್ತೇನೆ. ಯಾರು ಏನು ಹೇಳಿದರು ತಲೆಕೆಡಿಸಿಕೊಳ್ಳಲ್ಲ. ನನಗೆ ನನ್ನ ಜನರೇ ಸುಪ್ರೀಂ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ.ಸಿದ್ದಾರ್ಥ, ನಗರಸಭೆ ಸದಸ್ಯ ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ವಿ.ಆರ್.ನಾಗರಾಜ್, ಸಿದ್ದಲಿಂಗಪ್ಪ, ನಾಗರಾಜ್ ಸಂಗಮ್ಮ, ಹನುಮಂತಪ್ಪ, ಚಂದ್ರು ಇದ್ದರು.