i
ಹಿಗ್ಗಾಮುಗ್ಗಾ ಕಿತ್ತಾಡಿದ್ದ ಸಚಿವ ಶ್ರೀರಾಮುಲು-ಮಾಜಿ ಶಾಸಕ ತಿಪ್ಪೇಸ್ವಾಮಿ ಸಂಧಾನ ಯಶಸ್ವಿ, ಮೊಳಕಾಲ್ಮೂರು ಟಿಕೆಟ್ ಪಕ್ಕನಾ!?…
ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ರಾಜಕೀಯದಲ್ಲಿ ಯಾರು ಯಾವಾಗ ಸ್ನೇಹಿತರಾಗುತ್ತಾರೆ, ಯಾವಾಗ ವಿರೋಧಿಗಳಾಗುತ್ತಾರೆ ಎನ್ನುವುದನ್ನು ಹೇಳಲು ಸಾಧ್ಯವೇ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವ ಬಿ.ಶ್ರೀರಾಮುಲು ಕ್ಷೇತ್ರ ಬದಲಾಯಿಸುತ್ತಿದ್ದು ಆ ಕ್ಷೇತ್ರಕ್ಕೆ ತಮ್ಮ ಹಳೆಯ ದೋಸ್ತಿ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ತರಲು ಮಾಡಿರುವ ಪ್ರಯತ್ನ ಯಶಸ್ವಿಯಾದಂತೆ ಕಾಣುತ್ತಿದೆ.
ರಾಮುಲು ಮತ್ತು ತಿಪ್ಪೇಸ್ವಾಮಿ ಅವರಿಗೆ ವೈಮನಸ್ಸು ಆದ ನಾಯಕನಹಟ್ಟಿ ಸನ್ನಿಧಿಯಲ್ಲೇ ರಾಜಿಯಾಗಿಲು ಇಬ್ಬರು ನಾಯಕರು ಮುಂದಾಗಿದ್ದಾರೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಮುಂಭಾಗ ಇಬ್ಬರು ನಾಯಕರು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಸಮ್ಮುಖದಲ್ಲಿ ರಾಜಿಯಾಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ದೇವಸ್ಥಾನ ಮುಂಭಾಗ ಶ್ರೀರಾಮುಲು ಅವರಿಗೆ ತಿಪ್ಪೇಸ್ವಾಮಿ ಬೆಂಬಲಗರು ಸಾಕಷ್ಟು ಕಲ್ಲು ತೂರಿದ್ದರು. ಅದೇ ಜಾಗದಲ್ಲಿ ಇಬ್ಬರು ನಾಯಕರು ಕೈ ಕೈ ಹಿಡಿದು ರಾಜೀಯಾಗಿದ್ದಾರೆ. ಶಾಸಕ ತಿಪ್ಪಾರೆಡ್ಡಿ ಸಮ್ಮುಖದಲ್ಲಿ ರಾಜಿಯಾದ ಬಳಿಕ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಬ್ಬರು ನಾಯಕರ ಸಂಧಾನ ಭೇಟಿ ಹಿನ್ನೆಲೆ ನೂರಾರು ಬೆಂಬಲಿಗರು ಆಗಮಿಸಿ ಇಬ್ಬರು ನಾಯಕರಿಗೆ ಜೈಕಾರ ಹಾಕಿದರು.