i
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವಪೂರ್ಣವಾದದ್ದು: ಪಿಡಿಒ ಬಸವರಾಜಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವಂತದ್ದು ಅತ್ಯಂತ ಮಹತ್ವಪೂರ್ಣವಾದದ್ದು, ಸಮರ್ಥ ಹಾಗೂ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವಂತಹ ಹಕ್ಕನ್ನು ಪ್ರತಿಯೊಬ್ಬ ನಾಗರೀಕನು ಹೊಂದಿದ್ದಾರೆ ಎಂದು ದೊಡ್ಡಲಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜಪ್ಪ ಹೇಳಿದರು. ತಾಲ್ಲೂಕಿನ ದೊಡ್ಡಾಲಘಟ್ಟ ಗ್ರಾಮದಲ್ಲಿ ಶುಕ್ರವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಕೋಟೆ ಸಣ್ಣ ಬೋರಪ್ಪ ಬೋರಮ್ಮಗ್ರಾಮಾಂತರ ಪ್ರೌಢಶಾಲೆ ಸಂಯುಕ್ತಾಕ್ಷರದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಈ ದೇಶದ ಭವಿಷ್ಯವನ್ನು ನಿರ್ಧರಿಸುವಂತಹ ಹಾಗೂ ಅಭಿವೃದ್ಧಿಪಡಿಸುವಂತಹ ಕೆಲಸವನ್ನು ಮಾಡಬೇಕಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮೂಲಕ ನಾಯಕರನ್ನು ಆಯ್ಕೆ ಮಾಡುವಂತಹ ಅವಕಾಶವನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಕಲ್ಪಿಸಿದ್ದಾರೆ, ಮತದಾನ ಎಂಬುದು ನಮ್ಮ ನಾಗರೀಕನ ಹಕ್ಕು ಆ ಹಕ್ಕನ್ನು ಯಾರು ಸಹ ಹಣ, ಹೆಂಡಕ್ಕೆ ಮಾರಿಕೊಳ್ಳಬಾರದು. ಆಡಳಿತ ನಡೆಸುವಂತಹ ಸರ್ಕಾರವನ್ನು ನಿಯಂತ್ರಿಸುವಂತಹ ಶಕ್ತಿಯನ್ನು ಮತದಾರರು ಹೊಂದಿದ್ದಾರೆ, ಯಾರು ಸಹ ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯದೆ ಮತದಾನದ ಸಂದರ್ಭದಲ್ಲಿ ಎಲ್ಲರೂ ಸಹ ಮತದಾನ ಕೇಂದ್ರಗಳಿಗೆ ತೆರಳಿ ಮತ ಹಾಕಬೇಕು ಎಂದು ತಿಳಿಸಿದರು.
ಬೋರಪ್ಪ ಬೋರಮ್ಮ ಪ್ರೌಢ ಶಾಲೆಯ ಸಮಾಜ ಶಿಕ್ಷಕ ಶರಣಪ್ಪ ಮಾತನಾಡಿ ಭಾರತ ಸಂವಿಧಾನದಲ್ಲಿ ಅಂಬೇಡ್ಕರ್ ರವರು ಮತದಾನಕ್ಕೆ ವಿಶೇಷವಾದ ಸ್ಥಾನಮಾನವನ್ನು ನೀಡಿದ್ದಾರೆ. ಹಾಗಾಗಿ ಭಾರತೀಯ ನಾಗರಿಕರೆಲ್ಲರೂ ಕೂಡ ಮತದಾನ ಮಾಡುವುದು ಕಡ್ಡಾಯವಾಗಿದೆ. ಸರ್ಕಾರ ರಚನೆ ಆಗಬೇಕಾದರೆ ಅದು ಮತದಾರರಿಂದ ಮಾತ್ರ ಸಾಧ್ಯ 18 ವರ್ಷ ಮೇಲ್ಪಟ್ಟ ಯುವಕ ಯುವಕರು ತಪ್ಪದೆ ಗುರುತಿನ ಚೀಟಿಯನ್ನು ಮಾಡಿಸಿಕೊಂಡು ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತದಾರರ ಮೇಲಿದೆ ಎಂದು ತಿಳಿಸಿದರು.
ಈ ದೇಶದ ಭವಿಷ್ಯವನ್ನು ನಿರ್ಧರಿಸುವಂತದ್ದು ಪ್ರತಿಯೊಬ್ಬ ಮತದಾರರ ಹಕ್ಕು, ಮತದಾನದ ಬಗ್ಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಕುಟುಂಬದ ಸದಸ್ಯರಿಗೆ ಮತದಾನವನ್ನು ಹೇಗೆ? ಯಾಕೆ? ಮಾಡಬೇಕು ಎಂಬ ಬಗ್ಗೆ ಮಾಹಿತಿಯನ್ನು ನೀಡಬೇಕು.ಯಾವುದೇ ರೀತಿಯಾದಂತಹ ಆಮೀಷಗಳಿಗೆ ಒಳಗಾಗಿ ಮತದಾನವನ್ನು ಮಾಡಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೋಟೆ ಸಣ್ಣ ಬೋರಪ್ಪ ಬೋರಮ್ಮ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ವರಪ್ಪ ಶಿಕ್ಷಕರಾದ ಈಶ್ವರಪ್ಪ, ಲಕ್ಷ್ಮಣ್, ಲೋಹಿತೇಶ್ವರ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದ್, ಸದಸ್ಯರಾದ ಲಕ್ಷ್ಮಿಪತಿ. ಡಿ, ಪ್ರದೀಪ್, ಪ್ರವೀಣ್, ಕಿರಣ್. ದುರುಗಪ್ಪ,ಸುಮನ್, ಸುನಿಲ್, ಅಭಿಷೇಕ್, ನಾಗರಾಜ್ ಇದ್ದರು.