i
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ಆರೋಗ್ಯ
ಸಂಜೀವಿನಿಯನ್ನು ಪೌರ ಸೇವಾ ನೌಕರರಿಗೂ ವಿಸ್ತರಿಸಲು ಸರ್ಕಾರಕ್ಕೆ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಚಾರ್ ಆಗ್ರಹ ಮಾಡಿದ್ದಾರೆ. ಕರ್ನಾಟಕ ಪೌರಸಭೆಗಳ ( ಅಧಿಕಾರಿ ನೌಕರರಗಳ ನೇಮಕಾತಿ ನಿಯಮಗಳು 2010) ಇದರಲ್ಲಿ ನಿಯಮ 12 ರಲ್ಲಿ ಮುನ್ಸಿಪಲ್ ನೌಕರರಿಗೂ ವೈದ್ಯಕೀಯ ಹಾಜರಾತಿ ನಿಯಮಗಳನ್ನು ವಿಸ್ತರಿಸಿದ್ದು ಇರುತ್ತದೆ.
ಪೌರ ಸೇವಾ ನೌಕರರಿಗೆ ಆರೋಗ್ಯ ಸಂಜೀವಿನಿ ಭಾಗ್ಯ ಕಲ್ಪಿಸದೇ ಇರುವ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ಉಗ್ರವಾಗಿ ಅವರು ಖಂಡಿಸಿದ್ದಾರೆ.
ಆದುದರಿಂದ ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಒದಗಿಸಿದಂತೆ ಪೌರ ಸೇವಾ ನೌಕರರಿಗೂ ಇದನ್ನು ಪೌರ ಸೇವಾ ನೌಕರರಿಗೂ ಪೌರ ಸೇವಾ ನೌಕರರಿಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರವನ್ನು ಅವರು ವಿನಂತಿಸಿದ್ದಾರೆ.