i
ಒಂದೇ ದಿನ 9.77 ಕೋಟಿ ರೂ. ವಶಪಡಿಸಿಕೊಂಡ ಅಧಿಕಾರಿಗಳು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: mla election
ವಿಧಾನಸಭಾ ಚುನಾವಣೆಯಲ್ಲಿ ಕುರುಡು ಕಾಂಚಣ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು ಅಧಿಕಾರಿಗಳು ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ, ಜೊತೆಗೆ ಉಡುಗೊರೆ ಸಾಮಗ್ರಿಗಳು, ಮದ್ಯ ವಶ ಪಡಿಸಿಕೊಳ್ಳುತ್ತಿದ್ದಾರೆ.
ಸೋಮವಾರ ಒಂದೇ ದಿನ 9.77 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದು ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಒಟ್ಟಾರೆ 47 ಕೋಟಿ ರೂ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ರೇಷ್ಮೆ ಸೀರೆಗಳು, ಚಿನ್ನ, ಬೆಳ್ಳಿ, ಕುಕ್ಕರ್ ಮಿಕ್ಸರ್ ಮೊದಲಾದ ಉಡುಗೊರೆ ಸಾಮಗ್ರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ನಗದೂ ಸೇರಿದಂತೆ ಇವುಗಳೆಲ್ಲದರ ಮೌಲ್ಯ ಒಟ್ಟಾರೆ 126 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.