i
ರಸಗೊಬ್ಬರ ಬೆಲೆ ಏರಿಕೆ ಬೆನ್ನಲ್ಲೇ ಸಕ್ಕರೆ ಬೆಲೆ ಏರಿಸಿದ ಕೇಂದ್ರ ಸರ್ಕಾರ…
ಚಂದ್ರವಳ್ಳಿ ನ್ಯೂಸ್, ಮುಂಬೈ: nicrease price
ಇತ್ತೀಚೆಗೆ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಸಿ ರೈತರ ಆಕ್ರೋಶಕ್ಕೆ ಗುರಿಯಾಗಿತ್ತು. ಇದಲ್ಲದೆ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದರು. ಇದರ ಬೆನ್ನಿಗೆ ಸಕ್ಕರೆ ದರ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇಶದಲ್ಲಿ ಸಕ್ಕರೆ ದರ ಶೇ 6 ರಷ್ಟು ಏರಿಕೆ ಮಾಡುವ ಮೂಲಕ ಸಿಹಿ ಸಕ್ಕರೆ ಕಹಿಯಾಗತೊಡಗಿದೆ.
ಕಳೆದ ಎರಡು ವಾರದಲ್ಲಿ ಶೇಕಡ 6 ರಷ್ಟು ಏರಿಕೆ ಕಂಡಿರುವ ಸಕ್ಕರೆ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಕಬ್ಬು ಉತ್ಪಾದನೆ ಈ ವರ್ಷ ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆ ಜಾಸ್ತಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಸಕ್ಕರೆ ಬೆಲೆ ಭಾರಿ ಏರಿಕೆ ಕಂಡಿದ್ದು ಜನ ಸಾಮಾನ್ಯರು ತತ್ತರಗೊಂಡಿದ್ದಾರೆ.
ಅತಿ ಹೆಚ್ಚು ಕಬ್ಬು ಬೆಳೆಯುವ ಮಹಾರಾಷ್ಟ್ರದಲ್ಲಿ ಹವಾಮಾನ ವೈಪರೀತ್ಯ ಕಾರಣ ಕಬ್ಬು ಉತ್ಪಾದನೆ ಕುಸಿತ ಕಂಡಿದ್ದು, ಸಕ್ಕರೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಏಪ್ರಿಲ್ ನಿಂದ ದೇಶದಲ್ಲಿ ತಾಪಮಾನ ಹೆಚ್ಚಾಗಿ ತಂಪು ಪಾನೀಯ, ಐಸ್ ಕ್ರೀಮ್ ಬಳಕೆ ಹೆಚ್ಚಾಗಿದೆ. ಸಕ್ಕರೆ ಪೂರೈಕೆ ಕಡಿಮೆ ಇದ್ದು, ಬೇಡಿಕೆ ಹೆಚ್ಚಿರುವುದರಿಂದ ಸಕ್ಕರೆ ದರ ಹೆಚ್ಚಳಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಒಟ್ಟಾರೆ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.