i
ಹೊಳಲ್ಕೆರೆ ಕ್ಷೇತ್ರದಲ್ಲಿ ವಿಶೇಷ ಮತ್ತು ವಿನೂತನ ಚಿತ್ತಾಕರ್ಷಕ ಚುನಾವಣಾ ಜಾಗೃತಿ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಹೊಳಲ್ಕೆರೆ ತಾಲ್ಲೂಕು ಆಡಳಿತ ಹಾಗೂ ಹೊಳಲ್ಕೆರೆ ಪುರಸಭೆ ವತಿಯಿಂದ ಹೊಳಲ್ಕೆರೆ ಪಟ್ಟಣದಲ್ಲಿ ನಿರಂತರವಾಗಿ ಜರುಗುತ್ತಿರುವ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ಮತದಾರರ ಗಮನ ಸೆಳೆದವು.
ವಿಶೇಷ ಮತ್ತು ವಿನೂತನವಾದ ಚಿತ್ತಾಕರ್ಷಕ ವರ್ಲಿ ಕಲೆಯ ಯಕ್ಷಗಾನ ಮತ್ತು ಜಾನಪದ ಶೈಲಿಯ ಗೋಡೆ ಬರಹಗಳ ಮೂಲಕ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ಹೊಳಲ್ಕೆರೆ ಪುರಸಭೆ ಇಂದು ಹೊಳಲ್ಕೆರೆ ಪಟ್ಟಣದ ಮುಖ್ಯ ವೃತ್ತದ ಬಳಿ ಸಹಿ ಆಂದೋಲನ ಏರ್ಪಡಿಸಿತ್ತು. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ವಿವೇಕಾನಂದ ಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾರ್ವಜನಿಕರು ಸಂತಸದಿಂದ ಸ್ವಯಂಪ್ರೇರಣೆಯಿಂದ ಆಗಮಿಸಿ ಸಹಿ ಮಾಡಿ ಸೆಲ್ಪೀ ಕ್ಲಿಕ್ಕಿಸಿಕೊಂಡು ಮತದಾನ ಮಾಡುವ ಉತ್ಸಾಹದೊಂದಿಗೆ ತೆರಳುತ್ತಿದ್ದುದು ವಿಶೇಷವಾಗಿತ್ತು.
ತಹಶೀಲ್ದಾರ್ ನಾಗರಾಜ್ ಎನ್ ಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಕಛೇರಿಯ ಸಿಬ್ಬಂದಿಗಳು, ಸನಾವುಲ್ಲಾ, ಹರೀಶ್, ಪ್ರಶಾಂತ್, ಪುರಸಭೆ ಸಿಬ್ಬಂದಿಗಳಾದ ನೀಲಕಂಠಾಚಾರ್, ಪ್ರಶಾಂತ್, ದೇವರಾಜ್, ನಾಗಭೂಷಣ, ವೆಂಕಟೇಶುಲು, ವಿಜಯಕುಮಾರ್, ಹನುಮಂತಪ್ಪ, ಮಹಮದ್ ಶೌಕತ್ ಅಲಿ, ಶಿವಕುಮಾರ್, ನೌಷಾದ್, ಕಿಶೋರ್, ಮಹೇಶ್ವರಪ್ಪ, ರುದ್ರೇಶ್ ಮತ್ತು ಪೌರಕಾರ್ಮಿಕರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಿ ಆಂದೋಲನದಲ್ಲಿ ಭಾಗವಹಿಸಿದ್ದರು.