i
ನಿಮ್ಮ ಮನೆಯ ಮಗನಾಗಿ ಸೇವೆ ಮಾಡ್ತೀನಿ ಗೆಲ್ಲಿಸಿ-ಮಾಜಿ ಶಾಸಕ ಸುಧಾಕರ್ ಲಾಲ್…
ಚಂದ್ರವಳ್ಳಿ ನ್ಯೂಸ್, ಕೊರಟಗೆರೆ:
ನಿಮ್ಮ ಮನೆಯ ಮಗನಾಗಿ ಸೇವೆ ಮಾಡ್ತೀನಿ. ಮನೆಯ ಮಗನಿಗೆ ಮನ ತುಂಬಿ ಆಶೀರ್ವಾದಿಸಿ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮನವಿ ಮಾಡಿದರು.
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯಲ್ಲಿ ಶನಿವಾರ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ ನಂತರ ಕೊರಟಗೆರೆ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನನಗೇ ಆರ್ಶಿವಾದ ಮಾಡಲು ಮನೆ ಮಗನ ನಾಮಪತ್ರ ಸಲ್ಲಿಕೆ ವೇಳೆ ಹರಿದು ಬಂದ ಜನಸಾಗರವೇ 2023ರ ಚುನಾವಣೆಯ ನನ್ನ ಗೆಲುವಿಗೆ ಸಾಕ್ಷಿ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಕೊರಟಗೆರೆ ಕ್ಷೇತ್ರದ ಜನತೆಯ ಹೆಸರಿನಲ್ಲಿ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಹೋರಾಟಕ್ಕೆ ಶಕ್ತಿಯೇ ನಮ್ಮ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ಅಧ್ಯಕ್ಷ ಇಬ್ರಾಹಿಂ ಅವರುಗಳು. ನನ್ನ ಯಾವ ಜನ್ಮದ ಪುಣ್ಯವೊ ಗೊತ್ತಿಲ್ಲ. ನಿಮ್ಮೇಲ್ಲರ ಅಕ್ಕರೆಯ ಪ್ರೀತಿ ಮನೆ ಮಗನಿಗೆ ಸಿಕ್ಕಿದ್ದು ಎಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ರಾಜ್ಯ ಹಿಂದುಳಿದ ವರ್ಗದ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ರೈತ ಪರವಾದ ತೀರ್ಮಾನ ಮಾಡಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿಗೆ ಸೇರುತ್ತದೆ. ಈಗ ರೈತಾಪಿ ವರ್ಗ ಮತ್ತು ಬಡ ಜನತೆಯ ಅಭಿವೃದ್ದಿಗೆ ಪಂಚರತ್ನ ಯೋಜನೆ ಜಾರಿ ಮಾಡುವುದಾಗಿ ಕುಮಾರಣ್ಣ ನಮ್ಮ ಪ್ರತಿ ಮನೆಗೂ ಬಂದು ಮನವಿ ಮಾಡಿದ್ದಾರೆ. ಚುನಾವಣೆ ವೇಳೆ ಮಾತ್ರ ಬರುವ ರಾಷ್ಟ್ರೀಯ ನಾಯಕರ ಮಾತು ಯಾರು ನಂಬಬೇಡಿ. 30 ವರ್ಷದಿಂದ ನಿಮ್ಮ ಜೊತೆ ಇರುವ ಸುಧಾಕರಲಾಲ್ಗೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಉಪಾಧ್ಯಕ್ಷ ಮಂಜುನಾಥ, ಮುಖಂಡರಾದ ಕಾಮರಾಜು, ಸಿದ್ದಮಲ್ಲಪ್ಪ, ಪುಟ್ಟನರಸಪ್ಪ, ಸತ್ಯನಾರಾಯಣ್, ನಟರಾಜ್, ಕಾಕಿಮಲ್ಲಣ್ಣ, ಲಕ್ಷ್ಮೀನಾರಾಯಣ್, ಸುಮರಾಜು, ಪ್ರಕಾಶ್, ಇರ್ಷಾದ್, ಕಲೀಂವುಲ್ಲಾ, ಸೈಯದ್ ಸೈಪುಲ್ಲಾ, ಪಾರುಕ್, ಕೌಶಿಕ್, ರಮೇಶ್, ಅಮರ್, ಸಂತೋಷಗೌಡ, ಪವನ್ ಶ್ರೀರಾಮಯ್ಯ, ರವಿವರ್ಮ ಸೇರಿದಂತೆ ಇತರರು ಇದ್ದರು.