i
ಕಾಂಗ್ರೆಸ್ ಬಾವುಟಕ್ಕಿಂತ ಅಭ್ಯರ್ಥಿ ವೀರೇಂದ್ರ ಪಪ್ಪಿ ಪೋಟೋಗಳ ಹಾರಾಟವೇ ಜೋರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆನಾಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರೇಂದ್ರ ಪಪ್ಪಿ ಮಂಗಳವಾರ ಸಾವಿರಾರು ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ನಗರದ ಬಿಡಿ ರಸ್ತೆಯಲ್ಲಿ ಅಭ್ಯರ್ಥಿ ವೀರೇಂದ್ರ ಪಪ್ಪಿ ಅಬ್ಬರ ಜೋರಾಗಿತ್ತು. ಕಾಂಗ್ರೆಸ್ ಪಕ್ಷದ ಬಾವುಟಕ್ಕಿಂತ ಮಹಿಳೆಯರು, ಮಕ್ಕಳ ಕೈಯಲ್ಲಿ ವೀರೇಂದ್ರ ಪಪ್ಪಿ ಭಾವಚಿತ್ರಗಳು ರಾಜಾಜಿಸುತ್ತಿದ್ದವು.
ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಅದ್ಧೂರಿ ಮೆರವಣಿಗೆ ಮತ್ತು ರೋಡ್ ಶೋ ಮೂಲಕ ಪಪ್ಪಿಗೆ ಜೈಕಾರ ಹಾಕುತ್ತಾ ತಾಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಾಯಿತು.
ಬಹಿರಂಗ ರೋಡ್ ಶೋನಲ್ಲಿ ಸಾವಿರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದರು. ಜೊತೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.