i
ಲೋಕಾಯುಕ್ತ ದಾಳಿ, ಇಬ್ಬರು ಸರ್ಕಾರಿ ಅಧಿಕಾರಿಗಳ ಬಂಧನ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ: lokayukta trap
ಖಾಸಗಿ ಶಾಲೆಯೊಂದರ ಮಾನ್ಯತೆ ನವೀಕರಣಕ್ಕಾಗಿ ನಿರಾಕ್ಷೇಪಣಾ ಪತ್ರ (ಎನ್ಒಸಿ)ವನ್ನು ನೀಡಲು ಲಂಚದ ರೂಪದಲ್ಲಿ ಲ್ಯಾಪ್ಟಾಪ್ ಪಡೆಯುತ್ತಿದ್ದಾಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಹಾಗೂ ಫೈರ್ಮನ್ ಎಸ್.ಕೆ. ರಾಜೇಶ್ ಇವರುಗಳನ್ನು ಲೋಕಾಯುಕ್ತ ಪೊಲೀಸರು ಲ್ಯಾಪ್ ಟಾಪ್ ಸಮೇತ ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ದುರುಗೋಜಿ ಗೋಪಾಲರಾವ್ ಶಿಕ್ಷಣ ಚಾರಿಟಬಲ್ ಟ್ರಸ್ಟ್ ಅಧೀನದ ವಿದ್ಯಾದಾಯಿನಿ ಶಾಲೆಯ ಮಾನ್ಯತೆ ನವೀಕರಣಕ್ಕೆ ಸಂಸ್ಥೆಯ ಅಧ್ಯಕ್ಷ ಡಿ.ಜಿ. ರಘುನಾಥ್ ಅವರು ಅಗ್ನಿಶಾಮಕ ಇಲಾಖೆಯಿಂದ ಎನ್ಒಸಿ ಕೋರಿ ಅರ್ಜಿ ಸಲ್ಲಿಸಿ ಕಚೇರಿಗೆ ಅಲೆಯುತ್ತಿದ್ದರು.
ಅಗ್ನಿಶಾಮಕ ಠಾಣೆಯ ಬಸವಪ್ರಭು ಶರ್ಮ ಅವರು ಎನ್ಒಸಿ ನೀಡುವುದಕ್ಕೆ ಲ್ಯಾಪ್ಟಾಪ್ ರೂಪದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಡೆಲ್ ಕಂಪನಿಯ 38,500 ರೂ.ಬೆಲೆಯ ಲ್ಯಾಪ್ಟಾಪ್ ಅನ್ನು ಬುಧವಾರ ಮಧ್ಯಾಹ್ನ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ನೇತೃತ್ವದಲ್ಲಿ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ, ಇನ್ಸ್ಪೆಕ್ಟರ್ಗಳಾದ ಎಚ್.ಎಸ್. ರಾಷ್ಟ್ರಪತಿ, ಎನ್.ಎಚ್. ಆಂಜನೇಯ, ಸಿಬ್ಬಂದಿ ಚಂದ್ರಶೇಖರ್, ವಿ.ಎಚ್.ಆಂಜನೇಯ, ಎಸ್.ಎಂ. ವೀರೇಶಯ್ಯ, ಮುಜೀಬ್ಖಾನ್, ಎಸ್.ಎನ್.ಲಿಂಗೇಶ್, ಸಿ.ಎಚ್.ಬಸವರಾಜ, ಕೃಷ್ಣನಾಯ್ಕ ಮತ್ತಿತರ ಅಧಿಕಾರಿಗಳು ದಾಳಿಯ ನೇತೃತ್ವ ವಹಿಸಿದ್ದರು.