i
ಭೀಕರ ರಸ್ತೆ ಅಪಘಾತ ಚಿತ್ರದುರ್ಗ ನಗರಸಭೆ ನೌಕರ ಸಾವು, ಇತರೆ ಮೂರು ಮಂದಿಗೆ ಗಂಭೀರ ಗಾಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: accident in cta
ಭೀಕರ ರಸ್ತೆ ಅಪಘಾತದಲ್ಲಿ ಚಿತ್ರದುರ್ಗ ನಗರಸಭೆ ನೌಕರ ಗುರುಪ್ರಸಾದ್ (32) ಸಾವನ್ನಪ್ಪಿದ್ದು ಸಹೋದ್ಯೋಗಿಗಳಾದ ಪ್ರವೀಣ್, ಹರೀಶ್, ಮಂಜು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಸಮೀಪದ ಮೆಲ್ಸೇತುವೆ ಬಳಿ ಭೀಕರ ಅಪಘಾತ ನೆಡೆದಿದೆ. ಚಿತ್ರದುರ್ಗ ನಗರಸಭೆಯ ನೌಕರ ಗುರುಪ್ರಸಾದ್ ಹಳೆಯ ಕಾರ್ ಒಂದನ್ನು ಖರೀದಿಸಿದ್ದು ಟೆಸ್ಟ್ ಡ್ರೈವ್ಗಾಗಿ ತೆರಳದ್ದ ಸಂದರ್ಭದಲ್ಲಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ನೌಕರ ಗುರುಪ್ರಸಾದ್ ತೀವ್ರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ಸಹೋದ್ಯೋಗಿಗಳಾದ ಪ್ರವೀಣ್, ಹರೀಶ್, ಮಂಜು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಗುರುಪ್ರಸಾದ್ ಇತ್ತೀಚೆಗಷ್ಟೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಿಂದ ಚಿತ್ರದುರ್ಗ ನಗರಸಭೆಗೆ ವರ್ಗಾವಣೆಯಾಗಿದ್ದರು. ಇವರು ನಗರಸಭೆಯ ಆಶ್ರಯ ಶಾಖೆಯಲ್ಲಿ ದ್ವಿತೀಯ ದರ್ಜೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಗುರುಪ್ರಸಾದ್ ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದವರಾಗಿದ್ದು ಮೃತರಿಗೆ ಪತ್ನಿ ಒಂದು ವರ್ಷದ ಮಗು ಸೇರಿದಂತೆ ಅಪಾರ ಸ್ನೇಹಿತರನ್ನು ಅಗಲಿದ್ದಾರೆ.