i
ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಈ ಮೂರು ಪಕ್ಷದಿಂದಲೂ ಸ್ಪರ್ಧಿಸುವಂತೆ ಆಫರ್ ಬಂದಿತ್ತು-ನಟಿ ರಮ್ಯಾ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದಲೂ ಆಫರ್ ಬಂದಿತ್ತು ಎಂದು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿ ಚಿತ್ರನಟಿ, ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಂಡ್ಯ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳುವಂತೆ ಕಾಂಗ್ರೆಸ್ ಆಫರ್ ಮಾಡಿತ್ತು. ಬಿಜೆಪಿಯ ಉನ್ನತ ನಾಯಕರೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದ್ದಲ್ಲ ಸಚಿವರನ್ನಾಗಿ ಮಾಡುವ ಆಫರ್ ಕೂಡಾ ನೀಡಿದ್ದರು. ಜೆಡಿಎಸ್ ಪಕ್ಷವು ನನಗೆ ಒಂದು ರೀತಿ ಆಫರ್ ನೀಡಿತ್ತು ಎಂದು ರಮ್ಯಾ ಮಾಡಿದ್ದಾರೆ.
ಜೆಡಿಎಸ್ ನಾಯಕ ಕುಮಾರಸ್ವಾಮಿ ಹಾಗೂ ನಾನೂ ಆಕಸ್ಮಿಕವಾಗಿ ಸಲೂನ್ ಒಂದರಲ್ಲಿ ಭೇಟಿಯಾಗಿದ್ವಿ. ಆಗ ಅವರು ನೀವು ರಾಜಕೀಯದಿಂದ ದೂರ ಇರಬಾರದು, ನಿಮಗೆ ಶಕ್ತಿ ಇದೆ, ಬುದ್ಧಿ ಇದೆ ನೀವು ಹೀಗೆ ಸುಮ್ಮನೆ ಕೂರುವುದು ಸರಿಯಲ್ಲ ಅಂತ ಹೇಳಿದ್ದರು ಎಂದು ರಮ್ಯಾ ತಿಳಿಸಿದ್ದಾರೆ.