i
ಹಾಲಿ ಶಾಸಕರನ್ನು ಮನೆಗೆ ಕಳುಹಿಸಿ ಸುಧಾಕರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಲು ಪಣ ತೊಡಿ-ಜಿ.ಎಲ್.ಮೂರ್ತಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಮನೆಗೆ ಕಳುಹಿಸಿ ಮಾಜಿ ಸಚಿವ ಸುಧಾಕರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಲು ಕಾಂಗ್ರೆಸ್ ಕಾರ್ಯಕರ್ತರು ಪಣ ತೊಡಬೇಕು ಎಂದು ಕಾಂಗ್ರೆಸ್ ಪಕ್ಷದ ಎಸ್ಸಿ ಸೆಲ್ ಅಧ್ಯಕ್ಷ ಜಿ.ಎಲ್.ಮೂರ್ತಿಕರೆ ನೀಡಿದರು.
ತಾಲೂಕಿನ ಆಲೂರು ಕನಕರಾಜ್ ರವರ ತೋಟದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಭೆಗೆ ಕಸವನಹಳ್ಳಿ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಧಾಕರ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿಕೊಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಳಗೊಂಡನಹಳ್ಳಿ ನಾಗರಾಜ್, ಹಳೆ ನಾಡು ಸುರೇಶ್, ಕಸವನಳ್ಳಿಯ ಕಾಂಗ್ರೆಸ್ ಎಲ್ಲ ಮುಖಂಡರು ಭಾಗವಹಿಸಿದ್ದರು ಈ ಸಭೆಯ ನೇತೃತ್ವವನ್ನು ಆಲೂರು ಕನಕರಾಜ್ ವಹಿಸಿಕೊಂಡಿದ್ದರು.