i
ಮೂವತ್ತು ವರ್ಷಗಳ ಕಾಲ ಚಿತ್ರದುರ್ಗದವರು ಅನುಭವಿಸಿದ ಕಷ್ಟ ಸಾಕು-ವೀರೇಂದ್ರ ಪಪ್ಪಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೂವತ್ತು ವರ್ಷಗಳ ಕಾಲ ನೀವುಗಳು ಅನುಭವಿಸಿದ ಕಷ್ಟ ಸಾಕು. ಇನ್ನಾದರೂ ಎಚ್ಚೆತ್ತುಕೊಂಡು ಈ ಬಾರಿಯ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಕೆ.ಸಿ.ವೀರೇಂದ್ರಪಪ್ಪಿ ಮತದಾರರಲ್ಲಿ ಮನವಿ ಮಾಡಿದರು.
ಸಿದ್ದಾಪುರ, ಇದಾಯತ್ಪುರ, ಕಾಟಿಹಳ್ಳಿ, ಕಡ್ಲೆಗುದ್ದು, ಮೇಗಳಹಳ್ಳಿ, ಬೊಮ್ಮೆನಹಳ್ಳಿಯಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿದ
ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿ ನಾನು ಟಿ.ಎ.ಟಿ.ಕುಟುಂಬದ ಮೊಮ್ಮಗ, ಹೊರಗಿನವಲ್ಲ. ನಮ್ಮ ವಂಶದಲ್ಲಿ ನಾನು ನಾಲ್ಕನೆ ಐದನೆ
ತಲೆಮಾರಿನವನು, ನನ್ನ ವ್ಯಾಪಾರ ಗೋವಾ ಹೊರ ರಾಜ್ಯ ದೇಶ ಹಾಗೂ ವಿದೇಶಗಳಲ್ಲಿದೆ. ನಮ್ಮೂರಿನವನು ಈ ಮಟ್ಟಕ್ಕೆ
ಬೆಳೆದಿದ್ದಾನೆಂದರೆ ನೀವುಗಳು ಸಂತೋಷ ಪಡಬೇಕು. ಅದನ್ನು ಬಿಟ್ಟು ಅಸೂಯೆ ಪಟ್ಟರೆ ಏನು ಪ್ರಯೋಜನ ಎಂದು
ಎದುರಾಳಿಯನ್ನು ಪ್ರಶ್ನಿಸಿದರು.
ನಮ್ಮ ಕಂಪನಿಯಲ್ಲಿ ನಾಲ್ಕರಿಂದ ಐದು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದವರೆ ಐದು ನೂರು ಮಂದಿಯಿದ್ದಾರೆ.
ಕಳೆದ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದಿಂದ ಸ್ಪರ್ಧಿಸಿ ಸೋತು ಪರಾಭವಗೊಂಡಿದ್ದೆ. ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದೇನೆ.
ಗೆಲುವು ನನ್ನದೆ. ಎಲ್ಲಿಯೂ ಹೋಗಲ್ಲ. ಐದು ವರ್ಷಗಳ ಕಾಲ ಕ್ಷೇತ್ರದಲ್ಲಿದ್ದು, ನಿಮ್ಮಗಳ ಸೇವೆ ಮಾಡುತ್ತೇನೆ. ಅಪಪ್ರಚಾರಕ್ಕೆ
ಕಿವಿಗೊಡಬೇಡಿ ಎಂದು ಕ್ಷೇತ್ರದ ಜನತೆಯಲ್ಲಿ ವಿನಂತಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಐದು ಭರವಸೆಗಳನ್ನು ನೀಡಿದೆ. ಪ್ರತಿ ಬಡ ಕುಟುಂಬಕ್ಕೆ ಹತ್ತು ಕೆ.ಜಿ.ಅಕ್ಕಿ, ನಿರುದ್ಯೋಗಿ
ಪದವೀಧರಿಗೆ ತಿಂಗಳಿಗೆ ಮೂರು ಸಾವಿರ ರೂ. ಡಿಪ್ಲಮೋ ಪಡೆದವರಿಗೆ ಪ್ರತಿ ತಿಂಗಳು ಒಂದುವರೆ ಸಾವಿರ ರೂ.ಗಳನ್ನು ಎರಡು
ವರ್ಷಗಳ ಕಾಲ ನೀಡಲಾಗುವುದು. ಗೃಹಜ್ಯೋತಿ ಯೋಜನೆಯಡಿ ಇನ್ನೂರು ಯೂನಿಟ್ ಕರೆಂಟ್ ಉಚಿತ. ಗೃಹಲಕ್ಷ್ಮಿ
ಯೋಜನೆಯಡಿ ಮನೆಯ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ಉಚಿತವಾಗಿ ನೀಡಲಾಗುವುದು. ಮುಂದಿನ ತಿಂಗಳ
ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷ ಸರ್ಕಾರ ರಚಿಸಿದೊಡನೆ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ಹೇಳಿದರು.
2018 ರಲ್ಲಿ ನಡೆದ ಚುನಾವಣೆಯಲ್ಲಿ ನಾನು ಸೋತ ಮೇಲೂ ಕ್ಷೇತ್ರದಲ್ಲಿ ಸುತ್ತಾಡಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದೇನೆ.
ಸ್ವಂತ ಖರ್ಚಿನಿಂದ ಇಪ್ಪತ್ತೈದಕ್ಕೂ ಹೆಚ್ಚು ಬೋರ್ಗಳನ್ನು ಕೊರೆಸಿದ್ದೇನೆ. ಚುನಾವಣೆ ಇನ್ನು ಎರಡು ಮೂರು ದಿನ ಸಮಯವಿದ್ದಾಗ
ಬಿಜೆಪಿ. ಅಭ್ಯರ್ಥಿ ಮನೆ ಮನೆಗೆ ಬಂದು ಹಣದ ಆಮಿಷವೊಡ್ಡಬಹುದು. ಅವರು ನೀಡುವ ದುಡ್ಡು ಕಾಮಗಾರಿಗಳಲ್ಲಿ ನಲವತ್ತು
ಪರ್ಸೆಂಟ್ ಕಮಿಷನ್ ಪಡೆದಿರುವ ಹಣ. ಗಂಗಾಕಲ್ಯಾಣ, ಟಾರ್ಪಾಲ್ನಲ್ಲೂ ಕಮೀಷನ್ ಹೊಡೆಯುವುದನ್ನು ಬಿಟ್ಟಿಲ್ಲ. ಮೂವತ್ತು
ನಲವತ್ತು ವರ್ಷಗಳ ರಾಜಕೀಯ ಅನುಭವವುಳ್ಳ ಅವರು ಕ್ಷೇತ್ರವನ್ನು ಇಷ್ಟೊತ್ತಿಗಾಗಲೆ ಸಾಕಷ್ಟು ಅಭಿವೃದ್ದಿಪಡಿಸಬಹುದಿತ್ತು.
ಇನ್ನಾದರೂ ಮತದಾರರು ಜಾಗೃತರಾಗಿ ಬಡವರ ಪರವಾಗಿರುವ ಕಾಂಗ್ರೆಸ್ಗೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ ಎಂದು
ಕೋರಿದರು.
ನಗರಸಭೆ ಸದಸ್ಯ ವೆಂಕಟೇಶ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಆರ್.ಪ್ರಕಾಶ್, ರುದ್ರಾಣಿ ಗಂಗಾಧರ್, ಮಹೇಶ್ ಇನ್ನು ಅನೇಕರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.