i
ಸುಧಾಕರ್ ಮತ್ತು ಪೂರ್ಣಿಮಾ ಇವರಿಬ್ಬರನ್ನು ಮತದಾರರು ತಿರಸ್ಕರಿಸಲಿದ್ದಾರೆ -ತಿಪ್ಪೇಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪ್ರಮುಖ ಬೀದಿಯಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಕೆ ಟಿ ತಿಪ್ಪೇಸ್ವಾಮಿ ಹಿರಿಯೂರು ಮತ ಕ್ಷೇತ್ರದಲ್ಲಿ ಮೂರ್ನಾಲ್ಕು ಪಕ್ಷದವರು ಮತದಾರರಿಗೆ ಒಂದಲ್ಲ ಒಂದು ರೀತಿಯ ಆಮಿಷಗಳನ್ನು ಒಡ್ಡಿ ಅಕ್ರಮವಾಗಿ ಮತಗಳನ್ನು ಗಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಡಿ ಸುಧಾಕರ್ ಅವರು ಎರಡು ಬಾರಿ ಶಾಸಕರಾಗಿ ಒಂದು ಬಾರಿ ಮಂತ್ರಿಯಾಗಿ ಅದರಲ್ಲೂ ಸಮಾಜ ಕಲ್ಯಾಣ ಮಂತ್ರಿಯಾಗಿ ಈ ತಾಲೂಕಿನ ಅಭಿವೃದ್ಧಿ ಶೂನ್ಯವಾಗಿದೆ. ಯಾವುದೇ ಹೊಸ ಯೋಜನೆಗಳನ್ನು ತರದೆ ಅವರು ಅಕ್ರಮವಾಗಿ ಹಣ ಮಾಡುವುದೇ ಅವರ ಉದ್ದೇಶವಾಗಿತ್ತು. ನಂತರ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರು ಶಾಸಕರ ಅನುದಾನ ಮತ್ತು ಎರಡು ವರ್ಷ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯಿತಿ ಅನುದಾನವನ್ನ ಬಳಸಿಕೊಂಡು ಕೆಲವೊಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರಬಹುದು ಆದರೆ ಈ ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಾಂಗವನ್ನ ಹಿಡಿತದಲ್ಲಿಟ್ಟುಕೊಳ್ಳದೆ ಇಲಾಖೆಗಳಲ್ಲಿ ಕಂಡು ಕೇಳದ ರೀತಿಯ ಭ್ರಷ್ಟಾಚಾರ ತಾಂಡವಾಗಿ ರೋಷವಾಗಿ ಈ ತಾಲೂಕಿನ ಜನ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು ಈ ಬಾರಿ ಸುಧಾಕರ್ ಮತ್ತು ಪೂರ್ಣಿಮಾ ಶ್ರೀನಿವಾಸ್ ಇವರಿಬ್ಬರನ್ನು ತಿರಸ್ಕರಿಸುವ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
ಇನ್ನು ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರು ಇಂಜಿನಿಯರ್ ಅವರು ಮೂಲತಃ ಸಿರಾ ತಾಲೂಕಿನ ಬೆಜ್ಜಿಹಳ್ಳಿ ಗ್ರಾಮದವರು ಈ ತಾಲೂಕಿನ ಬಗ್ಗೆ ಅವರಿಗೆ ಪರಿಚಯವೇ ಇರುವುದಿಲ್ಲ ಮತ್ತು ಚುನಾವಣೆಯಲ್ಲಿ ಇಷ್ಟೊಂದು ಹಣ ಖರ್ಚು ಮಾಡಲು ಅವರು ಕೂಡ ಭ್ರಷ್ಟ ಅಧಿಕಾರಿಯಾಗಿ ಅಕ್ರಮವಾಗಿ ಗಳಿಸಿದ ಹಣವನ್ನ ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದಾರೆ ಇಂಥವರಿಗೆ ಮತ ಹಾಕಿದರೆ ನಮ್ಮ ತಾಲೂಕು ಇನ್ನಷ್ಟು ಅದೋಗತಿಗೆ ಬರುತ್ತದೆ ಎಂಬ ಭಾವನೆ ಮತದಾರರ ಮನಸ್ಸಲ್ಲಿ ಇದೆ ಆದ್ದರಿಂದ ಈ ಬಾರಿ ಮೂರು ಪಕ್ಷಗಳಿಗೂ ಪರಕೆಯೇ ಪರಿಹಾರ ಹೇಳುತ್ತಾರೆ ನಾನು ಸುಮಾರು 20 ವರ್ಷಗಳಿಂದ ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಸಾರ್ವಜನಿಕರ ಸೇವೆ ಮಾಡುತ್ತಾ ಅವರ ಕುಂದು ಕೊರತೆಗಳಿಗೆ ಸ್ಪಂದಿಸುತ್ತೇನೆ ಆದ್ದರಿಂದ ಮತದಾರರು ಮೂರು ಪಕ್ಷಗಳಿಂದ ಹಣ ಪಡೆದರೂ ಸಹ ಮತವನ್ನು ನಿಮಗೆ ಆಗುತ್ತೇವೆ ನೀವು ಎಲ್ಲಾ ಜನಸಾಮಾನ್ಯರಿಗೂ ಸಿಗುವುದರ ಜೊತೆಗೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನ ಪೂರ್ಣಗೊಳಿಸುವವರೆಗೂ ಬಿಡುವುದಿಲ್ಲ ಹೇಳುತ್ತಾರೆ ಆದ್ದರಿಂದ ಈ ಬಾರಿ ಮತದಾರರು ನನಗೆ ಕೈ ಹಿಡಿತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.