i
ತಲೆ ಬುರುಡೆ ಇಲ್ಲದ ಅಧಿಸೂಚನೆ ಹೊರಡಿಸಿದ ಇಲಾಖೆ ಕಾರ್ಯ ವೈಖರಿಗೆ ಖಂಡನೆ– ನಾರಾಯಣಾಚಾರ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಮ್ಮೊಮ್ಮೆ ಉನ್ನತ ಮಟ್ಟದ ಅಧಿಕಾರಿಗಳು ಬೇಕೋ ಬೇಡವೋ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾರೆ, ಇತ್ತೀಚೆಗೊಂದು ಇಲಾಖೆ ಅಧಿಸೂಚನೆ ಹೊರಡಿಸಿದ್ದು ಇದರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಈ ರೀತಿಯ ತಲೆ ಬುರುಡೆ ಇಲ್ಲದ ಅಧಿಸೂಚನೆ ಹೊರಡಿಸಿದ ನಗರಾಭಿವೃದ್ಧಿ ಇಲಾಖೆಯ ಕಾರ್ಯವೈಖರಿ ಕಾರ್ಯಕ್ಕೆ ಕರ್ನಾಟಕ ರಾಜ್ಯ ನಿವೃತ್ತ ಪೌರ ಸೇವಾ ಮೌಕರರು ಮತ್ತು ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ತೀವ್ರವಾಗಿ ಖಂಡಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳೆ ತಮ್ಮ ಅಧಿಸೂಚನೆಯ ಪ್ರಥಮದಲ್ಲಿ ಕರ್ನಾಟಕ ಪುರಸಭೆ ಪದ ಬಳಸಿದ್ದೀರಿ, ಅದು ಕರ್ನಾಟಕ ಪೌರಸಭೆಗಳ ಅಧಿನಿಯಮ-1964 ಅರ್ಥ ಮಾಡಿಕೊಳ್ಳಿ. ಈ ದಿನದ ಸರ್ಕಾರದ ಅಧಿಸೂಚನೆಯನ್ನು ಗಮನಿಸಿದ್ದೇನೆ. ಪ್ರಥಮ ಪ್ಯಾರಾದಲ್ಲಿ ಕಾನೂನಾತ್ಮಕವಾಗಿ ಸೂಚಿಸಿರುವುದು ಸರಿಯಿದೆ. ಆದರೆ ಎರಡನೇ ಪ್ಯಾರಾದಲ್ಲಿ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿರುವ ಪದ ಬಳಸಿರುವುದು ಅರ್ಥಹೀನ. ಕ್ರಮ ಸಂಖ್ಯೆ : 24-ನಗರ ಸಭೆ ರಾಯಚೂರು ಜಾರಿಗೆ ಬರುವ ದಿನಾಂಕ: 12.05.2023 ಅವಧಿ ಮುಗಿದ ಮೇಲೆ ಉಳಿದ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಜಾರಿಗೆ ಬರುವ ದಿನಾಂಕಗಳನ್ನು ಸೂಚಿಸಿರುವುದು ಎಷ್ಟು ಸಮಂಜಸ ಹಾಗೂ ಸೂಕ್ತ ಎಂದು ಪ್ರಶ್ನಿಸಿದ್ದಾರೆ.
ಕಾನೂನಾತ್ಮಕವಾಗಿ ಚುನಾವಣಾ ಆಯೋಗದ ಸಹಮತಿ ಅಗತ್ಯ ಇಲ್ಲ, ಇದು Routine work, ಸಹಮತ ಬಂದಿರುವುದು ಒಂದು ವೇಳೆ ಅದಕ್ಕೂ ಒಪ್ಪಿಕೊಳ್ಳೋಣ ಎಂದರೆ ಅಧಿಸೂಚನೆ ಹೊರಡಿಸಲು 9 ದಿನಗಳು ಬೇಕೆ ? ಚುನಾವಣಾ ನೀತಿ ಸಂಹಿತೆ ಇರುವಾಗ ಮಾನ್ಯ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಆಪ್ತ ಕಾರ್ಯದರ್ಶಿ ಇವರಿಗೆ ಪ್ರತಿಯನ್ನು ಹಾಕಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ನಾರಾಯಣಾಚಾರ್ ಪ್ರಶ್ನಿಸಿದ್ದಾರೆ.