i
ಸೋಲು ಕಂಡರೂ ದುರ್ಗ ಬಿಟ್ಟು ಓಡಿ ಹೋಗುವುದಿಲ್ಲ-ಜೆಡಿಎಸ್ ಅಭ್ಯರ್ಥಿ ರಘು ಆಚಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ, ಈ ಚುನಾವಣೆಯಲ್ಲಿ ನಾನು ಗೆದ್ದರು, ಸೋತರು ಸಹಾ ಚಿತ್ರದುರ್ಗದ ಜನತೆಗೆ ನೀಡಿದ ಪ್ರನಾಳಿಕೆಯಲ್ಲಿನ ವಾಗ್ದಾನ, ಭರವಸೆ ಈಡೇರಿಸಲು ಬದ್ದನಾಗಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿಂದು ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಓಡಿ ಹೋಗೋ ಮಗನಲ್ಲ, ನನ್ನ ಕ್ಷೇತ್ರದಲ್ಲಿ 30 ಸಾವಿರ ಮಕ್ಕಳು ಸಿಬಿಎಸ್ಸಿ ಶಾಲೆಯಲ್ಲಿ ಓದುವಂತೆ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ಮತದಾರರಿಗೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡುತ್ತೇನೆ ಸರ್ಕಾರದ ಹಣ ನೀಡಲಿ ನೀಡದಿರಲಿ ನಾನು ಅದನ್ನು ಜಾರಿ ಮಾಡುತ್ತೇನೆ. ಈ ದಿನದಿಂದ ನನ್ನ ಕುಟುಂಬಕ್ಕಾಗಲಿ, ನನ್ನ ಅಭಿಮಾನಿಗಳಿಗಾಗಲಿ, ಸ್ನೇಹಿತರಾಗಲಿ ಯಾರಾದರೂ ತೊಂದರೆ ನೀಡಿದರೆ ನಾನು ಸಹಾ ಆಟ ಆಡಿಸುತ್ತೇನೆ, ಆಹಿಂದ ಎಂದು ತೊಂದರೆ ನೀಡುತ್ತಿದ್ದಾರೆ ಇದರ ಬಗ್ಗೆ ಮುಂದಿನ ದಿನದಲ್ಲಿ ಸರಿಯಾದ ರೀತಿಯಲ್ಲಿ ತಕ್ಕ ಉತ್ತರ ನೀಡುವೆ ಎಂದರು.
ಐಟಿಯವರ ಬಂದಿದ್ದು ನಿಜ ನೋಟಿಸ್ ನೀಡಿದ್ದು ನಿಜ, ಸುಮ್ಮನೆ ಸಮಯ ಹಾಳು ಮಾಡಿದ್ದಾರೆ. ಸಣ್ಣ ಜಾತಿಯವನೆಂದು ಈ ರೀತಿ ಕಿರುಕುಳ ನೀಡಲಾಗುತ್ತಿದೆ, ನಾನು ಅಹಿಂದ ವರ್ಗಕ್ಕೆ ಸೇರಿದ್ದೇನೆ. ಸಿದ್ದಗಂಗಾ ಶ್ರೀಗಳ ಮಠದಲ್ಲಿಯೇ ಬೆಳದಿದ್ದು ಅಲ್ಲಿಯ ಗುಣಗಳು ನನಗೂ ಬಂದಿದೆ. ನಾನು ಯಾರಿಗೂ ಸಹಾ ತೊಂದರೆ ನೀಡಿದವನ್ನಲ್ಲ ಎಂದ ಅವರು ೧೭ ವರ್ಷದ ವಯಸ್ಸಿನ ಹುಡುಗ ಇಸ್ಪೇಟ್ ಆಡಲು ಪ್ರಾರಂಭ ಮಾಡಿದರೆ ಮುಂದಿನ ದಿನದಲ್ಲಿ ಮನೆಯನ್ನು ಹಾಳು ಮಾಡುತ್ತಾನೆ ಯಾವುದೇ ಕಾರಣದಿಂದಲೂ ಮೇ. ೧೬ರ ನಂತರ ಚಿತ್ರದುರ್ಗದಲ್ಲಿ ಕ್ಲಬ್ ಇಸ್ಪೀಟ್ ಆಡಲು ಬಿಡುವುದಿಲ್ಲ, ರೌಡಿಜಂ ಮಾಡಲು ಬಿಡುವುದಿಲ್ಲ ನನ್ನ ಹಣೆ ಬರಹ ಬರೆದವರು ಚಿತ್ರದುರ್ಗದ ಜನ ನಾನು ಇಲ್ಲೇ ಇರುತ್ತೇನೆ ಓಡಿ ಹೋಗುವ ಮಗನಲ್ಲ ಈ ಚುನಾವಣೆಯಲ್ಲಿ ಗೆಲುವುದೇ ನಾನು ಎಂದು ಆತ್ಮ ವಿಶ್ವಾಸದಿಂದ ರಘು ಆಚಾರ್ ತಿಳಿಸಿದರು.
ನನಗೆ ಯಾವುದೇ ಭಯ ಇಲ್ಲ ನನ್ನ ಹಣವನ್ನು ನಾನು ಖರ್ಚು ಮಾಡುತ್ತೇನೆ, ಐಟಿಯವರು ನೋಟಿಸ್ ನೀಡಿದರೆ ಅದಕ್ಕೆ ತಕ್ಕ ಉತ್ತರವನ್ನು ನಮ್ಮ ವಕೀಲರು ನೀಡುತ್ತಾರೆ. ನಾನು ಯಾವುದೇ ರೀತಿಯ ದಂಧೆ ಮಾಡಿಲ್ಲ, ನನ್ನ ಸ್ವಂತ ಹಣದಿಂದ ಬದುಕನ್ನು ನಡೆಸುತ್ತಿದ್ದೇನೆ, ಆಸ್ಪತ್ರೆ ಸಹಾ ಕಟ್ಟಿಸುತ್ತೇನೆ, ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.