i
ಹಿರಿಯೂರು ಶಾಸಕಿ ಪೂರ್ಣಿಮಾ ಸೋಲಿನ ಸುದ್ದಿ ಕೇಳಿ ಹೃದಯಾಘಾತಕ್ಕೆ ಓರ್ವ ಬಲಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ವಿಧಾನಸಭಾ ಚುನಾವಣೆ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಮತ ಹಿನ್ನೆಡೆಯಾಗಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿ ಹೃದಯಾಘಾತದಿಂದ ಅಭಿಮಾನಿಯೊಬ್ಬ ಸಾವು ಕಂಡಿರುವ ಘಟನೆ ಜರುಗಿದೆ.
ಹಿರಿಯೂರು ತಾಲೂಕಿನ ಆಲಮರದಹಟ್ಟಿ ಗ್ರಾಮದ ನಿವಾಸಿ ಸಿ.ವೀರಣ್ಣ(58) ಟಿವಿ ನೋಡುತ್ತಿರುವಾಗ ಹಿರಿಯೂರು ಶಾಸಕಿ ಪೂರ್ಣಿಮಾ ಅವರು ಮತ ಎಣಿಕೆಯಲ್ಲಿ ಹಿನ್ನೆಡೆಯಾಗಿದ್ದಾರೆ ಎನ್ನುವ ಸುದ್ದಿ ನೋಡುತ್ತಿದ್ದಂತೆ ಹೃದಯಘಾತದಿಂದ ಸಾವು ಕಂಡಿದ್ದಾರೆ. ಇವರ ಪತ್ನಿ ಸಮೀಪದ ಸೂರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಎಂದು ತಿಳಿದು ಬಂದಿದೆ.
ಬಿಜೆಪಿ ಪಕ್ಷದ ಅಭ್ಯರ್ಥಿ ಕೆ ಪೂರ್ಣಿಮಾ ರವರ ಹಿನ್ನೆಡೆಯಾಗಿದೆ ಎಂಬ ಸುದ್ದಿ ನೋಡಿ ಹೃದಯಘಾತವಾಗಿದೆ ಎನ್ನಲಾಗಿದೆ.