i
ಭಾರೀ ಗಾಳಿಗೆ ಮರಗಳು ಧರೆಗೆ, ಬಿಇಒ ಕಚೇರಿಗೆ ಅಪಾರ ಹಾನಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ಸೇರಿದಂತೆ ಹಿರಿಯೂರು ತಾಲೂಕಿನಲ್ಲಿ ಭಾರಿ ಗಾಳಿ ಸಹಿತ ಸುರಿದ ಸುಮಾರು ಮಳೆಗೆ ದೊಡ್ಡ ದೊಡ್ಡ ಮರಗಳು ನೆಲಕ್ಕುರುಳಿವೆ. ಅಲ್ಲದೆ ಇತ್ತೀಚೆಗೆ ಸರ್ಕಾರಿ ಕಚೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೇಲೆ ಅಳವಡಿಸಲಾಗಿದ್ದ ಜಿಂಕ್ ಶೀಟ್ ಭಾರಿ ಗಾಳಿಗೆ ಹಾರಿ ಹೋಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಇದಲ್ಲದೆ ಜೈನ ಟೆಂಪಲ್ ಸಮೀಪದ ಮಸೀದಿ ಮುಂದಿನ ಮರ ನೆಲಕ್ಕುರುಳಿದ್ದು ಹಾನಿಯಾಗಿದೆ. ಇದಲ್ಲದೆ ಮನೆಗಳ ಕಿಟಿಕಿ ಬಾಗಿಲುಗಳಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಜನಜೀವನ ಅಸ್ತವ್ಯಸ್ತವಾಗಿದೆ.
ಗಾಳಿ, ಮಳೆಯ ರಭಸಕ್ಕೆ ರಸ್ತೆ ಬದಿಯಲ್ಲಿ ಮರಗಳು ನೆಲಕ್ಕುರುಳಿದ್ದು, ವಿದ್ಯುತ್ ಕಂಬಗಳು ಬಿದ್ದಿವೆ. ಮನೆಗಳ ಮೇಲ್ಚಾವಣಿ ಹಾರಿಹೋಗಿವೆ.
ಹಿರಿಯೂರು ನಗರದ ಬಿಇಒ ಕಚೇರಿ ಸಮೀಪದ ತೇರುಮಲ್ಲೇಶ್ವರ ದೇವರ ಹೆಬ್ಬಾಗಿಲ ಮೇಲೆ ಮರ ಉರುಳಿ ಬಿದ್ದು ಒಂದಿಷ್ಟು ಹಾನಿಯಾಗಿದೆ. ಅಲ್ಲದೆ ಬಿಇಒ ಕಚೇರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಆದರೆ ಮಳೆ ಜಾಸ್ತಿ ಬಿದ್ದಿಲ್ಲ.