i
ಹಿರಿಯೂರು ವಿಧಾನಸಭಾ ಕ್ಷೇತ್ರದ ಸುಧಾಕರ್ ಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಮಂತ್ರಿ ಮಾಡಲಿ-ಶಿವರಂಜನಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ, ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದ ಡಿ ಸುಧಾಕರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಹಿರಿಯೂರು ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಶಿವರಂಜಿನಿ ಯಾದವ್ ಮನವಿ ಮಾಡಿದ್ದಾರೆ.
ಕಳೆದ 20 ವರ್ಷದಿಂದ ಡಿ ಸುಧಾಕರ್ ರವರು ಕಾಡುಗೊಲ್ಲ ಸಮಾಜವನ್ನು ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಗೊಲ್ಲರ ಹಟ್ಟಿಗಳ ಅಭಿವೃದ್ಧಿಗಾಗಿ ಹಟ್ಟಿ ದೇವಸ್ಥಾನ ಅಭಿವೃದ್ಧಿಗಾಗಿ ಸಾಕಷ್ಟು ಸಹಾಯ ಮಾಡಿದ್ದಾರೆ. ಕಾಡುಗೊಲ್ಲ ಸಮಾಜದ ಮಹಿಳೆ ಗುರುತಿಸಿ ಜಯಮ್ಮ ಬಾಲರಾಜ್ ಅವರು ಎಂ.ಎಲ್.ಸಿ ಮಾಡಿದ್ದಾರೆ. ಕಾಡುಗೊಲ್ಲ ಸಮಾಜದ ಅನೇಕರನ್ನು ಜಿಲ್ಲಾ ಪಂಚಾಯತಿ ಸದಸ್ಯರನ್ನಾಗಿ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎ.ಪಿ.ಎಂ.ಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ. ಹಿರಿಯೂರು ನಗರಸಭೆ ಇತಿಹಾಸದಲ್ಲಿ ಕಾಡುಗೊಲ್ಲ ಸಮಾಜದ ಮಹಿಳೆಯರನ್ನು ಯಾರು ಕೂಡ ನಗರಸಭೆ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ, ಸುಧಾಕರ್ ಅವರು ಮೊಟ್ಟಮೊದಲ ಬಾರಿಗೆ ಹಿರಿಯೂರು ಇತಿಹಾಸದಲ್ಲಿ ಕಾಡುಗೊಲ್ಲ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡುವ ಉದ್ದೇಶದಿಂದ ನನ್ನನ್ನು ಗುರುತಿಸಿ ನಗರಸಭೆ ಅಧ್ಯಕ್ಷರನ್ನಾಗಿ ಮಾಡಿದರು. ಸ್ವತಂತ್ರ ಬಂದಾಗಿನಿಂದಲೂ ನಮ್ಮ ಸಮಾಜದವರು ಶಾಸಕರಾಗಿರುವುದು ಕಾಂಗ್ರೆಸ್ ಪಕ್ಷದಿಂದ. ಕಳೆದ ಬಾರಿ ಕಾಡುಗೊಲ್ಲ ಸಮಾಜ ಬಿಜೆಪಿ ಪಕ್ಷವನ್ನು ಬೆಂಬಲಿಸಿ ತಪ್ಪು ಮಾಡಿದೆವು. ಬಿಜೆಪಿ ಪಕ್ಷದವರು ನಮ್ಮ ಸಮಾಜದ ಯಾವೊಬ್ಬರಿಗೂ ಎಂಎಲ್ಎ ಟಿಕೆಟ್ ಕೊಡಲಿಲ್ಲ. ಎಂಎಲ್ ಸಿ ಟಿಕೆಟ್ ಕೊಡಲಿಲ್ಲ, ಎಂ.ಪಿ ಟಿಕೆಟ್ ಕೊಡಲಿಲ್ಲ ಮತ್ತು ಎಂಎಲ್ ಸಿ ಮಾಡಲಿಲ್ಲ ನಿಗಮ ಮಂಡಳಿ ಅಧ್ಯಕ್ಷರನ್ನು ಮಾಡಲಿಲ್ಲ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾಡುಗೊಲ್ಲ ಸಮಾಜವನ್ನು ಎಸ್.ಟಿ. ಮೀಸಲಾತಿ ಗೆ.ಸೇರಿಸಲಿಲ್ಲ ಕಾಡುಗೊಲ್ಲ ಸಮಾಜದ ಅಭಿವೃದ್ಧಿಗೆ ಬಿಜೆಪಿ ಯಾವೊಬ್ಬ ಶಾಸಕರು ಸಂಸದರು ಶ್ರಮಿಸಲಿಲ್ಲ. ಇದನ್ನು ಮನಗಂಡು ಕಾಡುಗೊಲ್ಲ ಸಮಾಜ ಈ ಬಾರಿ 36 ತಾಲೂಕು 8 ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತು. ಹಿರಿಯೂರಿನಲ್ಲಿ ಸಹ ಹದಿನೆಂಟು ಸಾವಿರ ಮತ ಹಾಕುವುದರ ಮುಖಾಂತರ ಕಾಂಗ್ರೆಸ್ ಪಕ್ಷ ಸುಧಾಕರ್ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರು ಬಡವರು ದೀನ ದಲಿದರು ಅತಿ ಹೆಚ್ಚು ಇದ್ದು ಹಿಂದುಳಿದ ವರ ಅಥವಾ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿ ರಾಜಕೀಯ ಸಾಮಾಜಿಕ ಶೈಕ್ಷಣಿಕವಾಗಿ ಸ್ಥಾನಮಾನ ಗಳನ್ನು ನೀಡುವುದರ ಮೂಲಕ ಸರ್ವ ಜನಾಂಗದ ಅಭಿವೃದ್ಧಿಗಾಗಿ ಡಿ ಸುಧಾಕರ್ ಶ್ರಮಿಸಿದು ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆ ಮತ್ತಷ್ಟು ಅಭಿವೃದ್ಧಿಗಾಗಿ ಆಗಬೇಕಾದರೆ ಡಿ.ಸುಧಾಕರ್ ಅವರನ್ನು ಸಚಿವ ಸ್ಥಾನ ನೀಡುವುದರ ಜೊತೆಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಶಿವರಂಜನಿ ಯಾದವ್ ಮನವಿ ಮಾಡಿದ್ದಾರೆ.