i
ನಾವು 9 ವರ್ಷ ಮೋದಿ ತಡೆದುಕೊಂಡಿದ್ದೇವೆ, ಬಿಜೆಪಿ ಅವರು 15 ದಿನ ತಡೆದುಕೊಳ್ಳಲು ಆಗುತ್ತಿಲ್ಲ-ಸಚಿವ ತಂಗಡಗಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೋವಿ ಸಮಾಜಕ್ಕೆ ಮಂತ್ರಿ ಸ್ಥಾನ ನೀಡಿದ್ದು ಸಂತಸವಾಗಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಚಿತ್ರದುರ್ಗದಲ್ಲಿ ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀ ಹೇಳಿಕೆ ನೀಡಿ, ಭೋವಿ ಸಮಾಜದ ಶಿವರಾಜ್ ತಂಗಡಗಿ ಅವರನ್ನ ಮಂತ್ರಿಯಾಗಿ ಮಾಡಿದ್ದಾರೆ. ಸರ್ಕಾರಕ್ಕೆ & ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ನೀಡಿದ 5 ಗ್ಯಾರಂಟಿ ಯೋಜನೆ ಕುರಿತು ವಿಪಕ್ಷ ನಾಯಕ ಹೇಳಿಕೆ ಆಶ್ಚರ್ಯವಾಗಿದೆ. ನಮ್ಮ ಸರ್ಕಾರ ಬಂದು 15 ದಿನ ಆಗಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡ್ತಾರೆ. ಜೂನ್ 1 ದಿನಾಂಕ ನಮ್ಮ ವಿ.ಪಕ್ಷಗಳು ನೆನಪು ಮಾಡಿಕೊಳ್ತಿಲ್ಲ. ನಮ್ಮ ಸಿಎಂ ಮತ್ತು ಡಿಸಿಎಂ ಜೂನ್ 1 ಬಳಿಕ 5 ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದಾರೆ ಎಂದು ತಂಗಡಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಕೂಡಾ ಮೊದಲ 5 ಗ್ಯಾರಂಟಿಗಳ ಜಾರಿಗೆ ಮೊದಲ ಆದ್ಯತೆ ನೀಡಿ ಎಂದಿದ್ದಾರೆ. ಯಾಕೆ BJP ನಾಯಕರು ಇಷ್ಟು ಟೆನ್ಷನ್ ಆಗಿದ್ದಾರೆ ಗೊತ್ತಿಲ್ಲ. ಪ್ರಧಾನಿ ಮೋದಿ 15 ಲಕ್ಷ ಹಾಕುತ್ತೇನೆ ಎಂದಿದ್ದರು, ಅವರು ಹಾಕಿದ್ರಾ ಎಂದು ಪ್ರಶ್ನಿಸಿದ ಸಚಿವರು, ವಿಶೇಷವಾಗಿ ಪ್ರತಾಪ್ ಸಿಂಹ ಅವರಿಗೆ 15 ಲಕ್ಷ ಕೇಳಲು ದೈರ್ಯವಿಲ್ವಾ? ಈ ವಿಷಯ ಲೋಕಸಭೆಯಲ್ಲಿ ಪ್ರಶ್ನೆ ಮಾಡಲಿ ಎಂದು ತಾಕೀತು ಮಾಡಿದ ಅವರು ನಾವು ನೂರಕ್ಕೆ ನೂರು 5 ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಐದು ವರ್ಷ ಗ್ಯಾರಂಟಿ ಇಲ್ಲ ಎಂಬ ವಿಜಯೇಂದ್ರ ಹೇಳಿಕೆಗೆ ಐದು ಅಥವಾ ಎಷ್ಟು ವರ್ಷದ ಸಿದ್ದರಾಮಯ್ಯ ಎಂಬ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಅದನ್ನ ನಿರ್ಧಾರ ಮಾಡಲು ಸಣ್ಣ ವ್ಯಕ್ತಿ ನಾನು, ಹೈಕಮಾಂಡ್ ಇದೆ. ಹುಟ್ಟಿದ ತಕ್ಷಣ ಯಾವುದೇ ಮಗು ಓಡಾಡಲು ಸಾಧ್ಯವಿಲ್ಲ. ಜೂನ್ ಒಳಗೆ ಗ್ಯಾರಂಟಿ ಯೋಜನೆ ಜಾರಿ ಆಗಲಿದೆ, ಅದು ನಮ್ಮ ಕಮಿಟ್ಮೆಂಟ್. ಕಾಂಗ್ರೆಸ್ ಅಂದರೆ ಗ್ಯಾರಂಟಿ, ಬಿಜೆಪಿ ತರ ಬೋಗಸ್ ಅಲ್ಲ. ಯಾವುದೇ ಯೋಜನೆ ಜಾರಿಗೆ ಗೈಡ್ ಲೈನ್ಸ್ ಮುಖ್ಯ. ಯೋಜನೆ ಜಾರಿ ಬಳಿಕ ಪ್ರಶ್ನೆ ಮಾಡಿ ನಾವು ಹೇಳುತ್ತೇವೆ. ಯೋಜನೆ ಜಾರಿ ಬಳಿಕ ಬಿಜೆಪಿ ಅಡ್ರೆಸ್ ಇರಲ್ಲ. ನಮ್ಮ ಯೋಜನೆ ಬಡವರಿಗಾಗಿ ಯೋಜನೆ, ಶ್ರೀಮಂತರಿಗಾಗಿ ಅಲ್ಲ. ನಮ್ಮ ಪಕ್ಷ ಬಡವರ ಬಗ್ಗೆ ಕಾಳಜಿ ಇರುವಂತ ಪಕ್ಷ ಎಂದರು.
ಮಾಜಿ ಸಚಿವ ಸಿಟಿ ರವಿ ಅವರಿಗೆ ತಾಕತ್ ಇದ್ದರೆ 2 ಕೋಟಿ ಉದ್ಯೋಗದ ಕುರಿತು ಮೋದಿ ಅವರನ್ನ ಕೇಳಲಿ ಎಂದು ಸವಾಲ್ ಹಾಕಿದ ತಂಗಡಗಿ, 15 ದಿನಕ್ಕೆ ಇವರಿಗೆ ತಡೆಯೋಕ್ ಆಗಲ್ಲ, 9 ವರ್ಷ ನಾವು ತಡೆದುಕೊಂಡಿದ್ದೇವೆ. ಕಪ್ಪು ಹಣ ಎಷ್ಟು ದೇಶಕ್ಕೆ ವಾಪಸ್ ತಂದಿದ್ದರೆ ಉದಾಹರಣೆ ಕೊಡಲಿ. ಸುಮ್ಮನೆ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಸಿಎಂ ಕೊಟ್ಟ ಖಾತೆ ಸಮರ್ಥವಾಗಿ ನಿಭಾಯಿಸಲು ಸಿದ್ದ. ನಮ್ಮ ಪಕ್ಷದ ನಾಯಕರು ಕಸ ಗುಡಿಸು ಎಂದರೂ ನಿಷ್ಠೆಯಿಂದ ಕಸ ಗುಡಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.