i
ಎಟಿಎಂ ಬಂದ್, ಮುಗಿಲು ಮುಟ್ಟಿದ ಗ್ರಾಹಕರ ಪರದಾಟ…
ವರದಿ-ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಲವು ತಿಂಗಳಿನಿಂದ ಹಿರಿಯೂರು ನಗರದ ಎಸ್ ಬಿಐ ಬ್ಯಾಂಕಿನ ಎಟಿಎಂಗಳು ಬಂದ್ ಆಗುವ ಮೂಲಕ ಸಾರ್ವಜನಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
ಹಿರಿಯೂರು ನಗರದ ಮುಖ್ಯ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಕಾಯಂ ಆಗಿ ಧೂಳು ಹಿಡಿಯದಂತೆ ಮುಚ್ಚಿರುವುದರಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಸಂತೆ ದಿನವಾದ ಶನಿವಾರ ಮತ್ತು ಬುಧವಾರ ದೂರದ ಗ್ರಾಮಾಂತರ ಪ್ರದೇಶದಿಂದ ಆಗಮಿಸುವಂತ ಜನರು ಬಂದ್ ಆಗಿರುವ ಎಟಿಎಂಗೆ ಎಡತಾಕಿ ಹಣ ಲಭ್ಯವಾಗದೆ ತೊಂದರೆಗೀಡಾಗಿದ್ದಾರೆ.
ಇದರ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾವುದೇ ರೀತಿ ಪರಿಹಾರ ಸಿಗುತ್ತಿಲ್ಲ ಸಮಸ್ಯೆ ಮಾತ್ರ ಇನ್ನೂ ಪರಿಹಾರವಾಗಿಲ್ಲ.
ಹಿರಿಯೂರು ನಗರದ ಎಸ್ ಬಿಐ ಬ್ಯಾಂಕಿನ ಹಣ ಹಾಕುವ ಎಟಿಎಂಗಳು ಕೆಟ್ಟು ಹೋಗಿದ್ದು ತಿಂಗಳು ಕಳೆದು ಹೋದರು ತಲೆಕೆಡಿಸಿಕೊಳ್ಳದ ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಹಕರು ಬ್ಯಾಂಕಿನಲ್ಲಿ ಹಣ ಹಾಕಲು ಹೋದರೆ ಬ್ಯಾಂಕಿನ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಮನನೊಂದಿರುವ ಗ್ರಾಹಕರು ಮಾಧ್ಯಮಗಳಿಗೆ ತಿಳಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಹಿರಿಯೂರು ನಗರದಲ್ಲಿ ಎರಡು ಬ್ಯಾಂಕುಗಳ ಎಟಿಎಂಗಳು ಕೆಟ್ಟು ಹೋಗಿ ಹಲವು ತಿಂಗಳು ಕೆಳೆದಿವೆ. ಬ್ಯಾಂಕ್ ವ್ಯವಸ್ಥಾಪಕರು ಎಚ್ಚೆತ್ತುಕೊಂಡು ಸರಿಪಡಿಸಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಗ್ರಾಹಕರು ಎಚ್ಚರಿಸಿದ್ದಾರೆ.
ಗ್ರಾಹಕರಿಗೆ ಬ್ಯಾಂಕಿನಲ್ಲಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಬ್ಯಾಂಕಿನವರಿಗೆ ಏನಾದರೂ ಕೇಳಿದರೆ ಸರಿಯಾದ ರೀತಿಯಲ್ಲಿ ಸ್ಪಂದಿಸುವುದಿಲ್ಲ. 10–15 ನಿಮಿಷಗಳ ನಂತರ ಉಢಾಪೆ ಉತ್ತರ ನೀಡುತ್ತಾರೆ. ಬ್ಯಾಂಕ್ ಅಧಿಕಾರಿಗಳ ವರ್ತನೆಯಿಂದ ಸಾಕಷ್ಟು ಗ್ರಾಹಕರು ಬ್ಯಾಂಕುಗಳ ಕಡೆ ಮುಖ ಮಾಡುವುದಿಲ್ಲ. ಗ್ರಾಹಕರು ಬ್ಯಾಂಕುಗಳಿಗೆ ದೇವರು ಎನ್ನುವುದನ್ನು ಬ್ಯಾಂಕ್ ಅಧಿಕಾರಿಗಳು ಮರೆತುಬಿಟ್ಟಿದ್ದಾರೆ. ಗ್ರಾಹಕರು ಬ್ಯಾಂಕಿನಲ್ಲಿ ವೈವಾಟು ನಡೆಸಿದರೆ ಬ್ಯಾಂಕ್ ಚಾಲ್ತಿಯಲ್ಲಿರುತ್ತದೆ. ಸಿಬ್ಬಂದಿ ವರ್ಗದವರು ಗ್ರಾಹಕರ ಸಮಸ್ಯೆಗಳಿಗೆ ಬೇಕು ಬೇಡಗಳಿಗೆ ಸ್ಪಂದಿಸುವ ಕೆಲಸ ಮೊದಲು ಮಾಡಬೇಕು. ಗ್ರಾಹಕರನ್ನ ಪ್ರೀತಿ ವಿಶ್ವಾಸದಿಂದ ಕಾಣಬೇಕು. ಹಣ ಹಾಕುವ ಎಟಿಎಂಗಳನ್ನು ಸರಿಪಡಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.