i
ಜನ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರ್ಖಾನೆ ಬೇಡ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜನ ಜಾನುವಾರುಗಳ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವಂತ ಯಾವುದೇ ಕಾರ್ಖಾನೆ ನಮಗೆ ಬೇಡ, ಕೂಡಲೇ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು, ರೈತ ಮುಖಂಡರು ಪ್ರತಿಭಟನೆ ಮಾಡಿರುವ ಘಟನೆ ಹಿರಿಯೂರು ತಾಲೂಕಿನ ಗೌಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಗೊಂಡನಹಳ್ಳಿ ಸಮೀಪ ನಡೆದಿದೆ.
ಮಾಳಗೊಂಡನಹಳ್ಳಿ ಸಮೀಪ ಟೈಯರ್ ಸುಟ್ಟು ಪೆರಾಸಿಸ್ ಆಯಿಲ್ ತೆಗೆಯುವ ಕಾರ್ಖಾನೆಯಿಂದ ಸುತ್ತಮುತ್ತ ಗ್ರಾಮಸ್ಥರಿಗೆ ಮತ್ತು ರೈತರಿಗೆ ಜಾನುವಾರುಗಳ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ. ಟೈಯರ್ ಸುಡುವುದರಿಂದ ಹೊಗೆ, ಟೈಯರ್ ಸುಟ್ಟ ಧೂಳು, ಟೈಯರ್ ಸುಡುವುದರಿಂದ ಹೊರ ಹೊಮ್ಮುವ ದುರ್ವಾಸನೆಯಿಂದ ಮಕ್ಕಳು, ಮಹಿಳೆಯರು, ವಯೋವೃದ್ಧರು, ಜಾನುವಾರಗಳ ಮೇಲೆ ಸೇರಿದಂತೆ ರೈತರು ಬೆಳೆ ಬೆಳೆಯಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತ ಪಡಿಸಿದರು.
ಈ ಕಾರ್ಖಾನೆ ಆರಂಭವಾದ ದಿನದಿಂದ ಜಾನುವಾರುಗಳಿಗೆ ಮತ್ತು ಜನರಿಗೆ ತುಂಬಾ ಕಾಯಿಲೆಗಳು ಉಂಟಾಗುತ್ತಿವೆ. ಕೂಡಲೇ ಈ ಕಾರ್ಖಾನೆಯನ್ನು ಸ್ಥಗಿತಗೊಳಿಸಬೇಕೆಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಒ ಗಳಿಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿ ದಾಖಲೆಗಳನ್ನು ಪರಿಶೀಲಿಸಿದಾಗ 2018 19 ರಲ್ಲಿ ಅಡಿಕೆ ಪಟ್ಟಿ ತಯಾರಿಸುವ ಉದ್ದೇಶ ಸಲುವಾಗಿ ಪರವಾನಿಗೆ ನೀಡಲಾಗಿದೆ ತದನಂತರ 20 21ರಲ್ಲಿ ಚರಾಲಿಸಿಸ್ ಆಯಿಲ್ ಘಟಕ ಎಂದು ಜನರಲ್ ತೆಗೆದುಕೊಂಡಿದ್ದಾರೆ ಆದರೆ ಇದುವರೆಗೂ ಈ ಸ್ವತ್ತು ಮಾಡಿರುವುದಿಲ್ಲ ಕಾರ್ಖಾನೆಯ ನಾಮಫಲಕ ಹಾಕಿರುವುದಿಲ್ಲ ಸ್ಥಳೀಯರಿಗೆ ಯಾವುದೇ ಉದ್ಯೋಗ ಕೊಟ್ಟಿರುವುದಿಲ್ಲ ಯಾವ ಕಚ್ಚ ವಸ್ತು ಬಳಸಿ ಆಯಿಲ್ ತೆಗೆಯಲಾಗುತ್ತದೆ ಎನ್ನುವುದನ್ನು ತಿಳಿಸಿರುವುದಿಲ್ಲ ಮತ್ತು ಕೇವಲ ಐದು ಸಾವಿರ ರೂ ಮಾತ್ರ ಕಂದಾಯ ಕಟ್ಟಿರುತ್ತಾರೆ ನಮ್ಮ ಯಾವುದೇ ಶರತ್ತುಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿರುತ್ತಾರೆ ಆದ್ದರಿಂದ ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪರವಾನಗಿ ಕೊಟ್ಟಿರುವುದನ್ನ ರದ್ದುಪಡಿಸುತ್ತೇವೆ ಕೂಡಲೇ ಕಾರ್ಖಾನೆಯನ್ನು ಬೇರೆಡೆ ಸ್ಥಳಾಂತರಿಸಲು ನೋಟಿಸ್ ನೀಡುತ್ತೇವೆ ಎಂದು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಗೌಡನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಿತ್ತಮ್ಮ ಕೃಷ್ಣಪ್ಪ, ಉಪಾಧ್ಯಕ್ಷೆ ಪುಟ್ಟ ನರಸಮ್ಮ ಚಂದ್ರಹಾಸ, ಲಕ್ಷ್ಮೀದೇವಿ ಕರಿಯಣ್ಣ, ಮಾಳಗೊಂಡನಹಳ್ಳಿ ವಕೀಲ ನಾಗರಾಜ್, ತಿಮ್ಮಣ್ಣ, ಗಂಗಮ್ಮ, ರಮೇಶ್, ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ನಾಗಭೂಷಣ್, ಪಿಡಿಒ ತಿಪ್ಪೇಸ್ವಾಮಿ, ಕೆರೆ ಕೊಡಿಹಟ್ಟಿ ಶಿವಣ್ಣ, ಶಶಿಕುಮಾರ್, ಮಹೇಶ್, ಕುಂಟಪ್ಪ, ಟಿಟಿ ಚಿತ್ರಲಿಂಗಪ್ಪ, ಕರಿಯಪ್ಪ, ಕೃಷ್ಣಪ್ಪ, ಪುಲ್ಲೇಶ್, ಕಾಂತರಾಜು, ರಾಮು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.