i
ನಾಡಿನ ಮಹಾನ್ ಸಾಧಕರು ಸರ್ಕಾರಿ ಶಾಲೆಯಲ್ಲೇ ಓದಿದ್ದಾರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾರ್ಯಕ್ರಮದಲ್ಲಿ ಮಾತನಾಡಿದ ನಾಡಿನ ಮಹಾನ್ ಸಾಧಕರೆಲ್ಲರೂ ಸರ್ಕಾರಿ ಶಾಲೆಗಳಲ್ಲೇ ಓದಿದ್ದಾರೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಿದಾನಂದ ಸ್ವಾಮಿ ತಿಳಿಸಿದರು.
ತಾಲೂಕಿನ ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2023 24ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಇಲಾಖೆ ಉಚಿತ ಕಾರ್ಯಕ್ರಮಗಳಾದ ಪಠ್ಯಪುಸ್ತಕ ಸಮವಸ್ತ್ರ ಉಚಿತ ಸೈಕಲ್ ವಿದ್ಯಾರ್ಥಿವೇತನ ಮಧ್ಯಾಹ್ನದ ಬಿಸಿಯೂಟ ಯೋಜನೆ, ಎಲ್ಲಾ ಕಾರ್ಯಕ್ರಮಗಳು ಶಿಕ್ಷಣ ಶಿಕ್ಷಣ ಬಲವರ್ಧನೆಗೆ ಹಾಗೂ ಗುಣಾತ್ಮಕ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ದೇಶದ ದೊಡ್ಡ ದೊಡ್ಡ ಸಾಹಿತಿಗಳು ವಿದ್ವಾಂಸರು ಶಿಕ್ಷಣ ತಜ್ಞರು ಕ್ರೀಡಾಪಟುಗಳು ಓದಿರೋದು ಸರ್ಕಾರಿ ಶಾಲೆಯಲ್ಲಿಯೇ ಮಕ್ಕಳಿಗೆ ಓದುವ ಆಸಕ್ತಿ ಇರಬೇಕು ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ಸೇರಿಸುವಂತೆ ಕರೆ ನೀಡಿದರು ಈ ದಿನ ಎತ್ತಿನ ಗಾಡಿಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಪಕ್ಷಿ ನೋಟ ಹಾಗೂ ಕರಪತ್ರಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಶಾಲಾ ಆವರಣದಲ್ಲಿ ತಳಿರು ತೋರಣಗಳಿಂದ ಸಿಂಗರಿಸಿದ ವೇದಿಕೆಯಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪಮ್ಮ ಹಾಗೂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಾಗೂ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಚಿದನಂದಸ್ವಾಮಿ ಹಾಗೂ ಶಿಕ್ಷಣ ಸಂಯೋಜಕ ಅಂಜಿನಪ್ಪ, CRP ಮಾಲತೇಶ್, ಎಸ್ಡಿಎಂಸಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಸರಿತಾ, ಸದಸ್ಯರಾದ ಮಧು, ವಿಜಯಕುಮಾರ್ ಹಾಗೂ ಎಸ್ಎಂಸಿ ಸದಸ್ಯರಾದ ಮಹಾಂತಮ್ಮ, ವತ್ಸಲ, ಲಕ್ಷ್ಮಿ, ದೇವಿ, ರೇಷ್ಮಾ , ಗೀತಮ್ಮ, ಸುರೇಶ್, ಮುಖ್ಯ ಶಿಕ್ಷಕರು ದಿನೇಶ್ ರೆಡ್ಡಿ, ಸಹ ಶಿಕ್ಷಕ ಎಚ್ ರುದ್ರಪ್ಪ, ಸುದರ್ಶನ್, ಕೆ ರೇವಣ್ಣ, ಅರುಣ್ ಕುಮಾರ್, ಅಣ್ಣಪ್ಪ ಹಾಗೂ ಶಿಕ್ಷಕಿರಾದ ಕುಸುಮ, ಸುವರ್ಣಮ್ಮ, ವೀಣಾ, ರೀತಮಣಿ, ಶಾಲಾ ಮಕ್ಕಳು ಹಾಜರಿದ್ದರು.