i
ಪ್ರಕೃತಿಯಿಂದ ನಾವು ನಮ್ಮಿಂದ ಪ್ರಕೃತಿಯಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಕೃತಿಯಿಂದ ನಾವು ನಮ್ಮಿಂದ ಪ್ರಕೃತಿಯಲ್ಲ ಎಂಬ ವಾಕ್ಯದಂತೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಜಾನವಿ ಅಕಾಡೆಮಿ ಚಿತ್ರದುರ್ಗ ಮತ್ತು ನೆಹರು ಯುವ ಕೇಂದ್ರ ಚಿತ್ರದುರ್ಗ ಇವರ ಸಂಯೋಗದಲ್ಲಿ ಜಯಲಕ್ಷ್ಮಿ ಲೇಔಟ್(ಗಾರೆಹಟ್ಟಿ) ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಾನವಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ಪ್ರಾಂಶುಪಾಲ ವಿನಯ್ ಕುಮಾರ್.ಎ, ನಿಲಯ ಪಾಲಕ ರಾಕೇಶ್. ಬಿ, ಸಿಟಿಟಿ ಅಗ್ರಿಕಲ್ಚರ್ ಟ್ರೈನರ್ ಮಂಜುನಾಥ್ ಇವರುಗಳು ಗಿಡವನ್ನು ನೆಡುಸುವುದರ ಮುಖಾಂತರ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಚಿತ್ರದುರ್ಗ ಯುವ ಮುಖಂಡರಾದ ರವಿಕುಮಾರ್, ಶಿವಶಕ್ತಿ, ಬಾಲಾಜಿ, ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಗರ ಕಾರ್ಯದರ್ಶಿ ಬ್ರಿಜೇಶ್ ಭಗತ್, ವಿದ್ಯಾರ್ಥಿ ಪ್ರಮುಖರಾದ ಕಿರಣ್. ಕೆ. ಆರ್., ಹರ್ಷ ಹಾಗೂ ಚಿತ್ರದುರ್ಗದ ಹಲವು ಯುವ ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.