![](https://www.chandravallinews.com/wp-content/uploads/2023/06/WhatsApp-Image-2023-06-16-at-11.41.35-AM.jpeg)
i
ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತ, ಗ್ರಾಮದಲ್ಲಿ ನೀರವ ಮೌನ…
ಚಂದ್ರವಳ್ಳಿ ನ್ಯೂಸ್, ಚನ್ನಗಿರಿ:
ತಾಲೂಕಿನ ಹಿರೇಮಳಲ್ಲಿ ಸಮೀಪದ ಭದ್ರಾ ನಾಲೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಮಾವಿನಕಟ್ಟೆ ಗ್ರಾಮ ನಿವಾಸಿ ಅಭಿಷೇಕ್(28) ಮೃತ ದುರ್ದೈವಿ. ಹಿರೇಮಳಲ್ಲಿ ಗ್ರಾಮದಲ್ಲಿ ಭದ್ರಾ ನಾಲೆಯ ಸುರಂಗ ಹಾದುಹೋಗಿದ್ದು
ಸದ್ಯ ನಾಲೆಯಲ್ಲಿ ನೀರು ಇರಲಿಲ್ಲ ಆದ್ದರಿಂದ ಮೃತ ಅಭಿಷೇಕ್ ಸುರಂಗ ನೋಡಲು ಹೋಗಿದ್ದಾಗ ಈ ವೇಳೆ ನಾಲೆಯಿಂದ ನೀರನ್ನು ಮೇಲೆತ್ತಲು ಇಟ್ಟಿದ್ದ ಮೋಟಾರ್ ನಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಚನ್ನಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.