i
ನೂತನವಾಗಿ ಆಯ್ಕೆಯಾಗಿರುವ ಕಾನೂನು ನೆರವು ಅಭಿರಕ್ಷಕರಿಗೆ ಆತ್ಮೀಯ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾನೂನು ನೆರವು ಅಭಿರಕ್ಷಕ ಸೇವೆ ೨೦೨೨ರ ಅಡಿಯಲ್ಲಿ ಕರ್ನಾಟಕ ಕಾನೂನು ಸೇವೆ ಪ್ರಾಧಿಕಾರ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಆದೇಶದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿದೇಶನದಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಎಸ್.ವಿಜಯಕುಮಾರ್, ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಮೂರ್ತಿ.ಎಂ ಮತ್ತು ಸಹಾಯಕ ಕಾನೂನು ಅಭಿರಕ್ಷಕರನ್ನಾಗಿ ರಾಮಸ್ವಾಮಿ.ಹೆಚ್ ರವರು ನೂತನವಾಗಿ ಆಯ್ಕೆಯಾಗಿರುವುದರಿಂದ ಸತ್ಯಮೇವ ಜಯತೇ ಯುವ ಶಕ್ತಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನೂತನವಾಗಿ ಆಯ್ಕೆಯಾಗಿರುವ ಅಭಿರಕ್ಷಕರು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ಕಾನೂನು ಸಲಹೆ ಮತ್ತು ಆರೋಪಿಯ ಪರವಾಗಿ ಸರ್ಕಾರದ ವತಿಯಿಂದ ಉಚಿತವಾಗಿ ಪ್ರಕರಣವನ್ನು ತೆಗೆದುಕೊಂಡು ನ್ಯಾಯ ಒದಗಿಸಿಕೊಡುವಂತ ಮಹತ್ಕಾರ್ಯ ಮಾಡಲಿದ್ದಾರೆ. ಬಂಧಿಖಾನೆಗೆ ಹಾಜರಾಗಿ ವಿಚಾರಣೆ ನಡೆಸಬಹುದು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿ ಸೌಲಭ್ಯಗಳನ್ನು ಒದಗಿಸುವಂತಹ ಕ್ರಮವನ್ನು ಸಹ ಕೈಗೊಳ್ಳಬಹುದು ಮತ್ತು ಇತರೆ ಕಾನೂನಿಗೆ ಸಂಬಂಧಪಟ್ಟಂತೆ ಸಲಹೆ ಸೂಚನೆಗಳನ್ನು ಆರೋಪಿಗಳಿಗೆ ಮತ್ತು ನೊಂದವರಿಗೆ ನೀಡಬಹುದಾದ ಅಧಿಕಾರ ವ್ಯಾಪ್ತಿ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ವಕೀಲ ಬಿ.ಕೆ.ರಹಮತ್ವುಲ್ಲಾ, ಸತ್ಯಮೇವ ಜಯತೇ ಯುವ ಶಕ್ತಿ ಸಂಘದ ಅಧ್ಯಕ್ಷ ಹಾಗೂ ವಕೀಲ ಪ್ರತಾಪ್ಜೋಗಿ, ವಕೀಲರಾದ ಬೆಳಗಟ್ಟ ಅಶೋಕ್, ಅನಿಲ್ಕುಮಾರ್, ಬಿ.ಕೆ.ಮನ್ಸೂರ್ಪಾಷ, ಹೊನ್ನೂರ್ಸಾಬ್, ಬಿ.ಕೆ.ಇರ್ಫಾನ್, ಅಲಿಂ, ಸೋಮಶೇಖರರೆಡ್ಡಿ, ಶರಣಪ್ಪ, ರಾಮಣ್ಣ, ರಮೇಶ್, ಉಮಾಪತಿ, ನವಾಜ್, ಲೋಕೇಶ್, ಇತರರು ಉಪಸ್ಥಿತರಿದ್ದರು.