i
ಕರಗ ಹೊತ್ತು ದಾಖಲೆ ನಿರ್ಮಿಸಿದ ಪದ್ಮಾವತಿ ಅಮ್ಮ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ಬೆಂಗಳೂರಿನ ನಂದಿನಿ ಬಡಾವಣೆಯ ಕೃಷ್ಣನಂದ ನಗರದಲ್ಲಿ ಶ್ರೀದೇವಿ ಮುತ್ತು ಮಾರಿಯಮ್ಮ ದೇವಾಲಯದ 42ನೇ ಹೂವಿನ ಕರಗ ಮತ್ತು ಅಗ್ನಿಕೊಂಡ ಮಹೋತ್ಸವ ವೈಭವದಿಂದ ನೆರವೇರಿತು.
ಇಲ್ಲಿ ಮಹಿಳೆ ಹೂವಿನ ಕರಗ ಹೂರುವುದು ವಿಶೇಷವಾಗಿದೆ. ದೇವಿ ಆರಾಧಕರದ ಪದ್ಮಾವತಿ ಅಮ್ಮನವರು ಸತತ 42 ವರ್ಷಗಳಿಂದ ಹೂವಿನ ಕರಗ ಹೊತ್ತು ಯಶಸ್ವಿಯಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ, ಸಂಭ್ರಮಿಸಿದರು. ಮಹಿಳೆಯೊಬ್ಬರು ಕರಗ ಹೊರುವುದು ತೀರಾ ಅಪರೂಪ. ಆದರೆ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕರಗ ಹೊತ್ತಿರುವುದು ದಾಖಲೆಯಾಗಿ ಪರಿಣಮಿಸಿದೆ.
ಕೃಷ್ಣನಂದ ನಗರದ ದೇವಾಲಯದಿಂದ ಹೂವಿನ ಕರಗ ಮೆರವಣಿಗೆ ಹೊರಟು ಯಶವಂತಪುರದ ಎಪಿಎಂಸಿ ಯಾರ್ಡ್, ಗೌತಮ್ ನಗರ, ಮಾರಪ್ಪನ ಪಾಳ್ಯ. ಸೋಮೇಶ್ವರ ನಗರ ದ ಮುಖ್ಯಬೀದಿಗಳಲ್ಲಿ ಸಂಚರಿಸಿ ರಾತ್ರಿ 10 ಗಂಟೆಗೆ ಅಗ್ನಿಕುಂಡವನ್ನು ತುಳಿಯುವುದರ ಮೂಲಕ ಸಂಪನ್ನವಾಯಿತು. ಭಕ್ತಾದಿಗಳು ಭಕ್ತಿ ಭಾವದಿಂದ ಅಗ್ನಿ ಕುಂಡ ತುಳಿದು ಹರಕೆ ತೀರಿಸಿದರು.