i
ಕದ್ದ ಬೈಕ್ ಗಳಿಗೆ ಓರಿಜಿನಲ್ ನಂಬರ್ ನೀಡುತ್ತಿದ್ದ ಆರ್ಟಿಒ ಅಧಿಕಾರಿಗಳ ಬಂಧನ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಅಧಿಕಾರಿಗಳು ಮನಸ್ಸು ಮಾಡಿದರೆ ಎಲ್ಲ ಕೆಲಸ ಕಾರ್ಯಗಳು ಸಲೀಸು, ಖರೀದಿ ಮಾಡಿದ ಬೈಕ್ ಆದರೇನು, ಕದ್ದ ಬೈಕ್ ಆದರೆ ಒಟ್ಟಿನಲ್ಲಿ ಆರ್ಟಿಒ ಕಚೇರಿಯಿಂದ ಓರಿಜಿನಲ್ ನಂಬರ್ ಸಿಕ್ಕರೆ ಬಚಾವ್ ಆಗಬಹುದು ಎಂದುಕೊಂಡಿದ್ದವರನ್ನು ಖೆಡ್ಡಾಕ್ಕೆ ಬೀಳಿಸಲಾಗಿದೆ.
ಕಳ್ಳತನ ಮಾಡಿದ್ದ ಬೈಕುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೆ ಮಾರಾಟ ಮಾಡುತ್ತಿದ್ದ ಪ್ರಕರಣದ ಜಾಲದೊಂದಿಗೆ ಕೈಜೋಡಿಸಿದ್ದ ಆರ್ಟಿಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಜಗದೀಶ್, ಪ್ರದೀಪ್, ವಸಂತಕುಮಾರ್, ಶಶಿಕುಮಾರ್ ಇವರುಗಳನ್ನು ಪೊಲೀಸು ಬಂಧಿಸಿದ್ದಾರೆ. ಜೊತೆಗೆ ಮಧ್ಯವರ್ತಿ ರಸೂಲ್ ಎನ್ನುವನನ್ನೂ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಕದ್ದ ಬೈಕ್ ಗಳ ದಾಖಲಾತಿಗಳಿಗೆ ನಂಬರ್ ನಮೂದಿಸಿ ಓರಿಜಿನಲ್ ಸಹಿ ರೀತಿಯೇ 29-30ನೇ ಫಾರಂಗೆ ಏಜೆಂಟ್ ಸೈನ್ ಮಾಡುತ್ತಿದ್ದ. ಇದನ್ನು ಎಸ್ಡಿಎ ಆರ್ ಟಿಒ ಶ್ರೀಧರ್ ಮಲ್ನಾಡ್ ಟೇಬಲ್ನಲ್ಲಿ ಇಡುತ್ತಿದ್ದ. ಎಲ್ಲ ಫೈಲ್ ಗಳಿಗೆ ಆರ್ಟಿಒ ಸಹಿ ಹಾಕುತ್ತಿದ್ದರು. ನಂತರ ಸಾರಿಗೆ ಇಲಾಖೆಯಿಂದ ಓರಿಜಿನಲ್ ಕಾರ್ಡ್ ಎಸ್ಡಿಎಗೆ ಬರುತ್ತಿತ್ತು. ಇದಾದ ಬಳಿಕ ಐವತ್ತರಿಂದ ಆರವತ್ತು ಸಾವಿರ ರೂ.ಗೆ ಮಧ್ಯವರ್ತಿ ಮತ್ತು ಇಲಾಖೆ ಅಧಿಕಾರಿಗಳು ಮಾರಾಟ ಮಾಡಿ ಬಂದ ಹಣವನ್ನು ಎಲ್ಲರೂ ಸಮಾನವಾಗಿ ಹಂಚಿಕೆ ಮಾಡಿಕೊಳ್ಳುತ್ತಿದ್ದರು.
ಬಯಲಿಗೆ ಬಂದಿದ್ದು ಹೇಗೆ?ಹೊನ್ನಾಳಿಯಲ್ಲಿ ಕದ್ದ ಬೈಕ್ ದಾವಣಗೆರೆಯಲ್ಲಿ ಓಡಾಡುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ತಿಳಿದು ಟ್ರಾಫಿಕ್ ವೃತ್ತ ನಿರೀಕ್ಷಕ ಅನಿಲ್ ಸಿಟಿಯಲ್ಲಿ ಗಾಡಿಗಳ ತಪಾಸಣೆ ನಡೆಸುವ ವೇಳೆ ಬೈಕ್ ಸವಾರನೊಬ್ಬ ತನ್ನ ಓರಿಜಿನಲ್ ಕಾರ್ಡ್ ತೋರಿಸುತ್ತಾನೆ. ನಂತರ ಆ ಗಾಡಿ ನಂಬರ್ ನ್ನು ಯಂತ್ರಾಂಶದಲ್ಲಿ ನೋಡಿದಾಗ ಮಾರ್ಚ್ ತಿಂಗಳಿನಲ್ಲಿ ಕಳ್ಳತನವಾದ ಗಾಡಿಯಾಗಿರುತ್ತದೆ. ಅಲ್ಲದೇ ಆರ್ ಸಿ ಕಾರ್ಡ್ ನಲ್ಲಿ ಪಾರ್ಟಿ 2 ಅಂತ ನಮೂದಾಗಿರುತ್ತದೆ. ಇದಾದ ಬಳಿಕ ಆತನನ್ನು ಕರೆ ತಂದು ಈ ಹಿಂದೆ ಇರುವ ಜಾಲವನ್ನು ಬೇಧಿಸಲಾಗುತ್ತದೆ.