i
25 ವರ್ಷಗಳ ನಂತರ ಒಂದಾದ 40 ವಿದ್ಯಾರ್ಥಿಗಳು!, ಏಕೆ ಗೊತ್ತಾ?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎರಡೂವರೆ ದಶಕದ ನಂತರ ಸ್ನೇಹಿತರ ದಿನದಂದು ದೇಶ ವಿದೇಶಗಳಿಂದ ಆಗಮಿಸಿ ಒಂದೆಡೆ ಸಮಾವೇಶಗೊಂಡರಲ್ಲದೆ ಸಂಭಣಕ್ಕೆ ಕೊನೆಮೊದಲಿಲ್ಲದಂತೆ ಆತ್ಮೀಯ ಅಪ್ಪುಗೆಯಲ್ಲಿ ಮುಳುಗೆದ್ದರು.
ಕಷ್ಟ, ಸುಖ ಹಂಚಿಕೊಂಡು ಸಂತಸಪಟ್ಟರು. ಸ್ನೇಹ ಬಾಂಧವ್ಯದ ಮೂಲಕ ಭವಿಷ್ಯದಲ್ಲಿ ಜನಪರ ಸಮಸ್ಯೆಗಳಿಗೆ ಸ್ಪಂದಿಸುವ, ಕೈಲಾದಷ್ಟು ಆರ್ಥಿಕ ಸಹಾಯ ಮಾಡಲು ನಿರ್ಧರಿಸಿದರು. ಸ್ನೇಹ ಬಂಧನ ಸಮಾಜದಲ್ಲಿ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿತು.
ಇವರೆಲ್ಲರೂ ಬೆಂಗಳೂರಿನ ಕೆಂಗೇರಿ ಉಪನಗರದ ಜ್ಞಾನಬೋಧಿನಿ ಶಾಲೆಯ 1996ರ ಬ್ಯಾಚ್ ನ ವಿದ್ಯಾರ್ಥಿಗಳು. ವಿಜಯನಗರ ಕ್ಲಬ್ ನಲ್ಲಿ ಕುಟುಂಬದ ಸಮೇತ ಸೇರಿ ಸ್ನೇಹ ದಿನದಂದು ಹೊಸ ಭಾಷ್ಯ ಬರೆದರು.
25 ವರ್ಷಗಳ ನಂತರವೂ 40 ಮಂದಿ ಒಂದೇ ಕಡೆ ಹಾಜರಾಗಿ ಶಾಲೆಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು ವಿಶೇಷವಾಗಿತ್ತು. ಸಾಧನೆ ಮಾಡಿದ ಕ್ಷಣ, ಅನುಭವಿಸಿದ ಕಷ್ಟ, ಕಾರ್ಪಣ್ಯಗಳನ್ನು ನೆನೆದು ಕಂಬನಿ ಮಿಡಿದರು. ಸ್ನೇಹಲೋಕವೇ ಸ್ವರ್ಗ ಎಂದು ಮತ್ತೆ ಮತ್ತೆ ಆಲಂಗನ ಮಾಡಿ ಸಂಭ್ರಮಿಸಿದ ಕ್ಷಣ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ.