i
ಕುಲಶಾಸ್ತ್ರೀಯ ಅಧ್ಯಯನ ವರದಿ ಜಾರಿ ಮತ್ತು ಮೀಸಲಾತಿ ಹಕ್ಕೊತ್ತಾಯಕ್ಕೆ ಕುಂಚಿಟಿಗ ಮಹತ್ವದ ಸಭೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗರಲ್ಲಿನ ಒಡಕು, ಭಿನ್ನ ಧ್ವನಿ, ಸಂಘಟನೆ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು, ನಮ್ಮನ್ನು ಆಳುತ್ತಿರುವ ಸರ್ಕಾರಗಳು ಇನ್ನಿಲ್ಲದಂತೆ ಕುಂಚಿಟಿಗರನ್ನು ಪಾತಾಳಕ್ಕೆ ತುಳಿಯುತ್ತಿದ್ದರು ಕುಂಚಿಟಿಗ ಸಮುದಾಯ ಕುಂಭಕರ್ಣ ನಿದ್ದೆಯಿಂದ ಎದ್ದೇಳದಿದ್ದರೆ ಹೇಗೆ ಎಂದು ಅಖಿಲ ಕುಂಚಿಟಿಗ ಮಹಾ ಮಂಡಲದ ರಾಜ್ಯಾಧ್ಯಕ್ಷ ರಂಗ ಹನುಮಯ್ಯ ಪ್ರಶ್ನಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಕುಂಚಿಟಿಗರಲ್ಲಿ ಹೋರಾಟದ ಕಿಚ್ಚು ಮೂಡಿಸುವ ಸಲುವಾಗಿ, ಕುಂಚಿಟಿಗರು ಒಗ್ಗೂಡಲು, ಕುಂಚಿಟಿಗ ಮೀಸಲಾತಿ ಹಕ್ಕುಗಳನ್ನು ಪಡೆಯಲು, ರಾಜಕೀಯ ಸ್ಥಾನ ಮಾನಕ್ಕಾಗಿ ರಾಜ್ಯದ ವಿವಿಧ ಜಾತಿ, ಸಂಘಟನೆಗಳ ಹೆಸರಿನಲ್ಲಿ ಛಿದ್ರವಾಗಿರುವ ಎಲ್ಲ ಕುಂಚಿಟಿಗ ಬಂಧುಗಳು ಒಂದು ಕೂತು ಚಿಂತನ-ಮಂಥನ ಮಾಡುವ ಸಲುವಾಗಿ ಇದೇ ತಿಂಗಳ ಆಗಸ್ಟ್-13ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ತುಮಕೂರಿನ ಕೋತಿ ತೋಪಿನಲ್ಲಿರುವ ಕುಂಚಿಟಿಗರ ಸಮುದಾಯ ಭವನದಲ್ಲಿ ರಾಜ್ಯ ಮಟ್ಟದ ಸಭೆದ ಕುಂಚಿಟಿಗರ ಚಿಂತನ-ಮಂಥನ ಸಭೆ ಆಯೋಜಿಸಲಾಗಿದ್ದು ತಪ್ಪದೇ ಪ್ರತಿಯೊಬ್ಬರು ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಕುಂಚಿಟಿಗ ಸಮುದಾಯದ ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಹಾಲಿ-ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಕುಂಚಿಟಿಗ ಸಮಾಜದ ಸಮಾಜಮುಖಿ ಚಿಂತಕರು, ಹೋರಾಟಗಾರರು, ರಾಜ್ಯದ 17 ಜಿಲ್ಲೆಗಳಲ್ಲಿನ ವಿವಿಧ ಕುಂಚಿಟಿಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ದಯವಿಟ್ಟು ಕುಂಚಿಟಿಗ ಸಮಾದ ಒಳಿತಿಗಾಗಿ ಚಿಂತಿಸವವರು ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ರಂಗಹನುಮಯ್ಯ ಮನವಿ ಮಾಡಿದ್ದಾರೆ.