i
ಚಿಕ್ಕಮಗಳೂರಿಗೆ ಪ್ರವಾಸ ಹೊರಟವರು ಮಸಣಕ್ಕೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾವು ಯಾವ ಸಂದರ್ಭದಲ್ಲಿ ಹೇಗೆ ಬರುತ್ತದೆ ಎಂದು ಹೇಳಲಾಗದು. ಬಿಜಾಪುರದಿಂದ ಚಿಕ್ಕಮಗಳೂರಿಗೆ ಪ್ರವಾಸ ಹೊರಟಿದ್ದ ಕುಟುಂಬ ಇಂದು ಮಸಣ ಸೇರಿದೆ. ಸ್ನೇಹಿತರು, ಬಂಧುಗಳೊಂದಿಗೆ ಎರಡು ಕಾರಿನಲ್ಲಿ ಖುಷಿ-ಖುಷಿಯಾಗಿ ಟ್ರಾವೆಲರ್ ಹತ್ತಿದ್ದರು. ಕಾರು ಚಾಲನೆ ಮಾಡುತ್ತಿದ್ದ ಸಂಗನ ಬಸಪ್ಪ ಮತ್ತು ಪತ್ನಿ ರೇಖಾ, ಪುತ್ರ ಅಗಸ್ತ್ಯ ಸಂಗನ ಬಸಪ್ಪ, ಮತ್ತೊರ್ವ ಪುತ್ರಿ, ಮತ್ತೊರ್ವ ಪುತ್ರ, ಮತ್ತೊಬ್ಬರು ಸೇರಿ ಒಂದು ಕಾರಿನಲ್ಲಿ ಟ್ರಾವೆಲರ್ ಮಾಡುತ್ತಿದ್ದರು.
ಭಾನುವಾರ ಆಗಿದ್ದರಿಂದ ಶಾಲೆಗಳಿಗೆ ರಜೆ ಇದ್ದ ಕಾರಣ ಇಡೀ ಕುಟುಂಬ ಮತ್ತು ಮೃತರ ಬಂಧು ಈರಣ್ಣ ಸೇರಿ ಎರಡು ಕಾರಿನಲ್ಲಿ ಶನಿವಾರ ರಾತ್ರಿ ಬಿಜಾಪುರದಿಂದ ಚಿಕ್ಕಮಗಳೂರು ಕಡೆಗೆ ಹೊರಟಿದ್ದಾರೆ. ಚಿಕ್ಕಮಗಳೂರಿನ ಪ್ರಕೃತಿ ಧಾಮಗಳನ್ನು ನೋಡಿ ಎಂಜಾಯ್ ಮಾಡುವ ಯೋಚನೆಯಲ್ಲಿದ್ದರು. ಆದರೆ ಎಲ್ಲಿದ್ದನೋ ಗೊತ್ತಿಲ್ಲ ಜವರಾಯನ ರೂಪದಲ್ಲಿ ಕಾರೇ ಲಾರಿಗೆ ಡಿಕ್ಕಿ ಹೊಡೆದಿದೆ. ಅವಘಡದ ಪರಿಣಾಮ ನಾಲ್ಕು ಮಂದಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕಾರಿನಲ್ಲಿ ಕುಳಿತು ಹರಟೆ ಹೊಡೆಯುತ್ತ, ನಗೆ ಚಟಾಕಿ ಹಾರಿಸುತ್ತಿದ್ದ ಆ ನಗು-ಖುಷಿ ಒಂದೇ ಕ್ಷಣಕ್ಕೆ ಮಾಯವಾಗಿ ಬಿಟ್ಟಿದೆ. ವಿಧಿಯಾಟಕ್ಕೆ 4 ಮಂದಿ ಉಸಿರು ನಿಂತಿದೆ.
ಚಿತ್ರದುರ್ಗ ಸಮೀಪದ ಹೊಸಪೇಟೆ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50ಎನಲ್ಲಿ ನಡೆದ ಅತ್ಯಂತ ಭೀಕರ ಹಾಗೂ ದಾರುಣ ಅಪಘಾತ ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕೈರಿ ಕೆ.ಪರಶುರಾಂ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.