i
ಮಾದಾರ ಚನ್ನಯ್ಯ ಸ್ವಾಮೀಜಿಗಳು ಕರ್ನಾಟಕದ ಯೋಗಿ ಆದಿತ್ಯನಾಥ್….
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾದಾರ ಚನ್ನಯ್ಯ ಸ್ವಾಮೀಜಿಗಳು ನಾನು ಸ್ವಾಮೀಜಿ ಆಗಬೇಕೆಂದು ಮೊದಲೇ ಕನಸು ಕಂಡವರಲ್ಲ, ಅವರ ತಾಯಿ ಕೂಡಾ ಯಾವುದೇ ಕನಸು ಕಟ್ಟಿಕೊಂಡು ಸ್ವಾಮೀಜಿಗಳನ್ನ ಬೆಳೆಸಲಿಲ್ಲ. ಆದರೆ ಮಾದಾರ ಚನ್ನಯ್ಯ ಸ್ವಾಮೀಜಿಗಳು ಕಾಲದ ಪರಿಮಿತಿಗೆ ಸಿಲುಕಿ ಮಠಾಧೀಶರಾದಾಗ ಆಘಾತಕ್ಕೆ ಒಳಗಾಗುವವರು ಹೆತ್ತ ತಾಯಿ ಮತ್ತು ಪೋಷಕರು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಭೀಮಸಮುದ್ರ ಸಮೀಪದ ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿಯಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಗಂಗಮ್ಮ ಅವರ ಶಿವಗಣಾರಾಧನೆ ಅಂಗವಾಗಿ ಏರ್ಪಡಿಸಿದ್ದ ಸರ್ವ ಶರಣರ ಸಮ್ಮೇಳನದಲ್ಲಿ ಅವರು ಅಶೀರ್ವಚನ ನೀಡಿ ಮಾತನಾಡಿದರು. ಇಂದಿನ ಪರಿಸ್ಥಿತಿಯಲ್ಲಿ ಪೂರ್ವಾಶ್ರಮದ ತಂದೆ-ತಾಯಿಯನ್ನು ಮಠಾಧೀಶರು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಮಠಕ್ಕೆ ಕೊಡುಗೆಯಾಗಿ ಮಠಾಧೀಶರನ್ನು ನೀಡಿದ ಪೋಷಕರನ್ನು ಸಮುದಾಯವೇ ಆರೈಕೆ ಮಾಡಬೇಕು. ಇಂದು ಯಾರೊಬ್ಬ ಶ್ರೀಮಂತರುಮಠಾಧೀಶರಾಗಲು ಆಸಕ್ತಿತೋರುವುದಿಲ್ಲ. ಸಂಸ್ಕಾರಯುತ ಕೌಟುಂಬಿಕ ಹಿನ್ನೆಲೆಯವರು ಸಿಗುತ್ತಿಲ್ಲ. ಹೆತ್ತ ತಾಯಿಯನ್ನು ಜೀವನದಲ್ಲಿ ಮರೆತರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಎಂದು ಹೇಳಿದರು.
ನಮ್ಮ ನಮ್ಮಲ್ಲಿರುವ ವೈಯಕ್ತಿಕ ದೋಷಗಳಿಂದಾಗಿ ಇಂದು ಸ್ವಾಮೀಜಿಗಳಿಗೆ ಮೌಲ್ಯ ಕಡಿಮೆಯಾಗುತ್ತಿದೆ. ಸ್ವಾಮೀಜಿಗಳು ಸಾಮಾಜಿಕವಾಗಿ ಜನರನ್ನು ಮರೆತು ವೈಭವದಲ್ಲಿ ತೇಲಾಡುತ್ತಿರುವಂತ ಸ್ವಾಮೀಜಿಗಳು ಇದ್ದಾರೆ. ಇಂತಹ ಯಾವುದೇ ವೈಭವಗಳನ್ನು ಮೈಗೆ ಅಂಟಿಸಿಕೊಳ್ಳದೆ ಮಾದಾರ ಚನ್ನಯ್ಯ ಸ್ವಾಮೀಜಿಗಳು ಭಕ್ತರೇ ನನ್ನ ಬಂಧುಗಳು, ಭಕ್ತರೇ ನನ್ನ ದೇವರುಗಳು ಎಂದು ಭಾವಿಸಿ ಸಮಾಜಮುಖಿಯಾದ ಕೆಲಸ ಮಾಡುವಂತ ಸ್ವಾಮೀಜಿಗಳು ಭಕ್ತರ ದೃಷ್ಠಿಯಲ್ಲಿ ದೇವರಾಗುತ್ತಾರೆ. ಹಾಗೇ ಮಾದಾರ ಚನ್ನಯ್ಯ ಸ್ವಾಮೀಜಿಯವರು ಸಮಾಜಮುಖಿ ಚಿಂತನೆ ಇಟ್ಟುಕೊಂಡವರು. ಅವರು ಕೇವಲ ಮಾತುಗಾರರಲ್ಲ, ಕೆಲಸಗಾರರು ಹೌದು ಎಂದು ಶ್ರೀಗಳು ಹೇಳಿದರು.
ಮಾದಾರ ಚನ್ನಯ್ಯ ಸ್ವಾಮೀಜಿಗಳು ಒಳ್ಳೆಯ ವಾಗ್ಮಿಗಳು, ಉತ್ತಮವಾದ ಸಾಹಿತ್ಯ ರಚನೆ ಇದೆ. ಒಳ್ಳೆಯ ಕೆಲಸಗಾರರು ಹೌದು, ಅವರ ಸಾಹಿತ್ಯ ಭಾಷೆ ತುಂಬಾ ಸರಳವಾಗಿದ್ದು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಅವರು ಸಾಹಿತ್ಯ ರಚನೆ ಮಾಡುತ್ತಾರೆ. ಹಾಗೆ ವಿನೀತರಾಗಿ ಬಾಗುವ ಗುಣಗಳನ್ನು ಹೊಂದಿರುವ ಮಾದಾರ ಚನ್ನಯ್ಯ ಸ್ವಾಮೀಜಿ ಎಲ್ಲರ ಪ್ರೀತಿ ವಿಶ್ವಾಸಗಳಿಸಿದ್ದಾರೆ. ಹಣದಿಂದ ಯಾರೂ ದೊಡ್ಡವರಾಗುವುದಿಲ್ಲ, ಪೀಠದಿಂದ ಮನುಷ್ಯ ದೊಡ್ಡವನಾಗುವುದಿಲ್ಲ, ವಿದ್ಯೆಯಿಂದಲೂ ದೊಡ್ಡವನಾಗುವುದಿಲ್ಲ, ಹೃದಯದ ಶ್ರೀಮಂತ ಭಾವನೆಗಳಿಂದ ದೊಡ್ಡವನಾಗುತ್ತಾನೆ. ಮನಸ್ಸಿನಲ್ಲಿ ಎಲ್ಲರ ಬಗ್ಗೆ ದ್ವೇಷ ಇಟ್ಟುಕೊಂಡರೆ ಸಣ್ಣರಾಗುತ್ತೀರಿ, ಎಲ್ಲರ ಬಗ್ಗೆ ಪ್ರೀತಿ ಬೆಳೆಸಿಕೊಂಡು ಮಾದಾರ ಚನ್ನಯ್ಯ ಸ್ವಾಮೀಜಿ ದೊಡ್ಡವರಾಗಿದ್ದಾರೆ ಎಂದು ಅವರು ತಿಳಿಸಿದರು.
ತಾನು ಎತ್ತರದ ಸ್ಥಾನಕ್ಕೆ ಹೋಗಿದ್ದೇನೆಂದು ಹೆತ್ತ ತಾಯಿಯನ್ನು ಮಾದಾರ ಚನ್ನಯ್ಯ ಸ್ವಾಮೀಜಿ ಮರೆತಿಲ್ಲ. ಪ್ರತಿಯೊಬ್ಬರು ಉತ್ತಮ ಸಂಸ್ಕಾರಗಳನ್ನು ಕಲಿಯಬೇಕಿದೆ. ಭಾರತೀಯ ಪರಂಪರೆ, ಸಂಸ್ಕೃತಿಗೆ ಧಕ್ಕೆ ಆಗುತ್ತಿದೆ. ತಂದೆ, ತಾಯಿಗಳನ್ನು ಮರೆತರೆ ಮುಂದೆ ನರಕ ಕಾದಿಡುತ್ತದೆ ಎಂದು ಅವರು ಎಚ್ಚರಿಸಿದರು.
ನಾವು ಸ್ವಾಮೀಜಿಗಳಾಗಲು ಬೆಳಕನ್ನು ನೀಡಿದವರು ಹೆತ್ತ ತಂದೆ, ತಾಯಿಗಳು. ಬಡವರು ಮತ್ತು ಸಂಸ್ಕಾರವಂತರು ಮಾತ್ರ ಇಂದು ಸ್ವಾಮೀಜಿಗಳಾಗುತ್ತಾರೆ. ಶ್ರೀಮಂತರ್ಯಾರು ಸ್ವಾಮೀಜಿಗಳಾಗಲ್ಲ ಎಂದು ಸಾಣೇಹಳ್ಳಿ ಸ್ವಾಮೀಜಿ ಹೇಳಿದರು.ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ,ಯಾವುದೇ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಮಠಗಳಿಗೆ ಸಮರ್ಪಣೆ ಮಾಡುವುದು ಅಪರೂಪ. ಒಮ್ಮೆ ನಮ್ಮನ್ನು ಮಠಕ್ಕೆ ಸಮರ್ಪಣೆ ಮಾಡಿದ ನಂತರ ನಾವುಗಳು ಪ್ರೀತಿ ಕಡಿದುಕೊಂಡು ಸಮಾಜಮುಖಿ ಕೆಲಸ ಮಾಡುತ್ತೇವೆ. ಸಮುದಾಯವು ನೈತಿಕ ಬೆಂಬಲ ನೀಡಬೇಕು ಎಂದು ಕೋರಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಪ್ರತಿಯೊಬ್ಬರ ಬದುಕು ಉಜ್ವಲವಾಗಲು ಪ್ರಮುಖ ಕಾರಣಕರ್ತರೆಂದರೆ ಅವರ ತಂದೆ ತಾಯಿಗಳು. ತಂದೆ ತಾಯಿಗಳು ನೀಡಿದ ಉತ್ತಮ ಸಂಸ್ಕಾರ ನೀಡಿದ್ದರಿಂದ ಎತ್ತರಕ್ಕೆ ಬಂದಿದ್ದೇವೆ. ಎತ್ತರಕ್ಕೆ ಬೆಳೆದವರು ಹೆತ್ತ ತಂದೆ ತಾಯಿಗಳನ್ನು ಮರೆತಿರುವ ನೀಚರು ಇದ್ದಾರೆ ಎಂದು ತಿಳಿಸಿದರು.
ಯಾವುದೇ ದೇವರುಗಳಿಗೆ ಕೈ ಮುಗಿಯುವ ಬದಲು ಜೀವಂತ ದೇವರಾದ ತಂದೆ ತಾಯಿಗಳಿಗೆ ಕೈ ಮುಗಿದು ಆರೈಕೆ ಮಾಡಬೇಕೆಂದು ಸೂಚ್ಯವಾಗಿ ಹೇಳಿದರು. ಗಂಗಮ್ಮ ಸಮಾಜಕ್ಕೆ ಆದರ್ಶಪ್ರಾಯರು. ಬಹಳಷ್ಟು ಜನರ ಉತ್ತಮ ಬದುಕಿಗೆ ಕಾರಣಕರ್ತರು ತಂದೆ ತಾಯಿಗಳು. ಆದರೆ, ಎತ್ತರಕ್ಕೆ ಹೋದಂತೆ ಹೆತ್ತವರನ್ನು ಮರೆಯುವ ನೀಚರೂ ಇದ್ದಾರೆ ಎಂದರು.
ನಾನು ದೇವರಿಗೆ ಕೈ ಮುಗಿಯುವುದಿಲ್ಲ, ಯಾಕಂದರೆ ದೇವರು ಮಾತನಾಡುವುದಿಲ್ಲ, ತಂದೆ, ತಾಯಿ, ಬುದ್ಧ, ಬಸವಣ್ಣ ದಾರ್ಶನಿಕರೇ ದೇವರುಗಳು. ನಾನು ಸಚಿವನಾಗಿದ್ದಾಗ ಅನೇಕರು ವರ್ಗಾವಣೆಗೆ ತಂದೆ ತಾಯಿ ನೋಡಿಕೊಳ್ಳುವ ಕಾರಣ ಬರೆದುಕೊಂಡು ಬರುತ್ತಿದ್ದರು. ಆದರೆ, ಯಾರೂ ನೋಡಿಕೊಳ್ಳುವುದಿಲ್ಲ. ತಂದೆ ತಾಯಿ ಅನಾರೋಗ್ಯ ಹೊಂದಿದ್ದರೂ ಗಂಡ ಹೆಂಡತಿ ತಿರುಪತಿಗೆ ಹೋಗುತ್ತಾರೆ ಎಂದು ವಿಷಾದಿಸಿದರು.ಗಂಗಮ್ಮ ಸಮಾಜಕ್ಕೆ ಆದರ್ಶಪ್ರಾಯರು. ಬಹಳಷ್ಟು ಜನರ ಉತ್ತಮ ಬದುಕಿಗೆ ಕಾರಣಕರ್ತರು ತಂದೆ ತಾಯಿಗಳು. ಆದರೆ, ಎತ್ತರಕ್ಕೆ ಹೋದಂತೆ ಹೆತ್ತವರನ್ನು ಮರೆಯುವ ನೀಚರೂ ಇದ್ದಾರೆ. ತಂದೆ, ತಾಯಿ, ಬುದ್ಧ, ಬಸವಣ್ಣ ದಾರ್ಶನಿಕರೇ ದೇವರುಗಳು. ನಾನು ಸಚಿವನಾಗಿದ್ದಾಗ ಅನೇಕರು ವರ್ಗಾವಣೆಗೆ ತಂದೆ ತಾಯಿ ನೋಡಿಕೊಳ್ಳುವ ಕಾರಣ ಬರೆದುಕೊಂಡು ಬರುತ್ತಿದ್ದರು. ಆದರೆ, ಯಾರೂ ನೋಡಿಕೊಳ್ಳುವುದಿಲ್ಲ. ತಂದೆ ತಾಯಿ ಅನಾರೋಗ್ಯ ಹೊಂದಿದ್ದರೂ ಗಂಡ ಹೆಂಡತಿ ತಿರುಪತಿಗೆ ಹೋಗುತ್ತಾರೆ ಎಂದು ವಿಷಾದಿಸಿದ ಅವರು, ಪ್ರತಿ ದಿನ ತಂದೆ, ತಾಯಿಗಳಿಗೆ ನಮಸ್ಕರಿಸಿ ಹೊರ ಹೋಗುತ್ತಿದ್ದೆ, ಹೆತ್ತ ತಂದೆ ತಾಯಿಗಳನ್ನು ಪ್ರತಿಯೊಬ್ಬರು ಚೆನ್ನಾಗಿ ಆರೈಕೆ ಮಾಡಬೇಕು ಎಂದರು.
ಮಾದಾರ ಚನ್ನಯ್ಯ ಸ್ವಾಮೀಜಿಯಂತಹವರನ್ನು ಸಮಾಜಕ್ಕೆ ಕೊಡುಗೆ ನೀಡಿದ ಗಂಗಮ್ಮನವರ ಸೇವೆ ಮರೆಯಬಾರದು ಎಂದು ತಿಳಿಸಿದರು.ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತಿಗೆ ದೊರೆಯಾದರೂ ತಾಯಿಗೆ ಮಗನೇ. ಜನ್ಮ ನೀಡಿದ ತಂದೆ ತಾಯಿಗಳನ್ನು ಎಂದೂ ಮರೆಯಬಾರದು. ಇಂದು ಜನ್ಮ ನೀಡಿದವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ತಂದೆ ತಾಯಿಗೆ ವಿದೇಶದಲ್ಲಿರುವ ಮಕ್ಕಳು ಪೋನ್ ಪೇ, ವಿಡಿಯೋ ಕಾಲ್ ಮೂಲಕ ಮಾತನಾಡಿಸುತ್ತಿದ್ದಾರೆ ಎಂದರು.ಆಧುನಿಕರು, ವಿದ್ಯಾವಂತರು ಮಾನವೀಯತೆ ಮರೆತು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಹಣ ತರುವ ವ್ಯಕ್ತಿ ಆಗಬೇಡ. ಮಾನವೀಯ ಮೌಲ್ಯ ಬೆಳೆಸಬೇಕು. ತಾಯಿ ಗಂಗಮ್ಮ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಮಾನವೀಯ ಸೆಲೆಯೊಂದಿಗೆ ಬೆಳೆಸಿದ್ದಾರೆ. ಕರ್ನಾಟಕದ ಯೋಗಿ ಆದಿತ್ಯನಾಥ್ ಆಗಿದ್ದಾರೆ. ಇಡೀ ಭಾರತಕ್ಕೆ ಅವರ ಪರಿಚಯ ಆಗಿದೆ ಎಂದು ಹೇಳಿದರು.
ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮಾತನಾಡಿ, ಸೂರ್ಯನಿಗೆ ಸೂರ್ಯನೇ ಸಾಕ್ಷಿ, ತಾಯಿಗೆ ಯಾವ ಹೋಲಿಕೆಯೂ ಇಲ್ಲ. ಮಾದಾರ ಚನ್ನಯ್ಯ ಶ್ರೀಗಳಿಗೆ ಜೀವದಾನ ಮಾಡಿದ ಮಹಾತಾಯಿ ಗಂಗಮ್ಮ. ನಮ್ಮ ಸ್ವಾಮೀಜಿ ಎಲ್ಲ ಮಠಾಧೀಶರನ್ನು ಅನುಸರಿಸಿಕೊಂಡು ಸಮಾಜಕ್ಕೆ ಗೌರವ ತಂದು ಕೊಟ್ಟಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಿಗಜಿಣಗಿ, ಮಾಜಿ ಶಾಸಕ ಎ.ವಿ.ಉಮಾಪತಿ, ಕಾಂಗ್ರಸ್ ಮುಖಂಡರಾದ ಜಿ.ಎಸ್.ಮಂಜುನಾಥ್, ಮುರುಳೀಧರ ಹಾಲಪ್ಪ, ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ, ಉದ್ಯಮಿ ಜಿ.ಎಸ್.ಅನಿತ್, ನಿವೃತ್ತ ನ್ಯಾಯಾಧೀಶರಾದ ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಅನಿಲ್ಕುಮಾರ್, ಬಿಎಸ್ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.ಶ್ರದ್ಧಾಂಜಲಿಯ ಸಭೆಯಲ್ಲಿ ಆದಿಜಾಂಬವ ಮಠದ ಷಡಾಕ್ಷರಮುನಿ ಸ್ವಾಮೀಜಿ, ಮುರುಘಾ ಮಠದ ಬಸವಪ್ರಭು ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಗಾಣಿಗ ಗುರು ಪೀಠದ ಶ್ರೀ ಬಸವಕುಮಾರ ಸ್ವಾಮೀಜಿ, ವಾಲ್ಮೀಕಿ ಮಹಾಸಂಸ್ಥಾನ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಸಿದ್ದಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತಮಾ ನ೦ದ ಪುರಿ ಸ್ವಾಮೀಜಿ, ಛಲವಾದಿ ಮಹಾಸಂಸ್ಥಾನದ ಬಸವ ನಾಗೀದೇವ ಸ್ವಾಮೀಜಿ ಸೇರಿದಂತೆ ಮತ್ತಿತರ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಗೋವಿಂದ. ಎಂ.ಕಾರಜೋಳ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಾದಿಗ ದಂಡೋರದ ಮುಖಂಡ ಮಂದಕೃಷ್ಣ ಮಾದಿಗ, ಮಾಜಿ ಶಾಸಕ ಎ.ವಿ.ಉಮಾಪತಿ, ಬಿಎಸ್ ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ನಿವೃತ್ತ ನ್ಯಾಯಮೂರ್ತಿ ನಾರಾಯಣಸ್ವಾಮಿ ಇದ್ದರು.