i
ನಿವೃತ್ತ ಪೌರ ನೌಕರರಿಗೆ ಮತ್ತು ಪಿಂಚನಿದಾರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರ ಸ್ಥಳೀಯ ಸಂಸ್ಥೆಗಳ ನಿವೃತ್ತ ಪೌರ ನೌಕರರಿಗೆ ಮತ್ತು ಕುಟುಂಬ ಪಿಂಚನಿದಾರರಿಗೆ, ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದು ಸರ್ಕಾರಕ್ಕೆ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಅಭಿನಂದಿಸಿದ್ದಾರೆ.
ಸರ್ಕಾರದ ಆದೇಶ ದಿನಾಂಕ:01-03-2023ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಶೇ.17% ರಷ್ಟು ಮಧ್ಯಂತರದ ಸೌಲಭ್ಯವನ್ನು ಮಂಜೂರು ಮಾಡಿದ್ದು ಇದನ್ನು ನಮ್ಮಗಳಿಗೆ ವಿಸ್ತರಣೆ ಮಾಡುವ ಸಲುವಾಗಿ ರಾಜ್ಯಾಧ್ಯಕ್ಷನಾದ ನಾನು ದಿನಾಂಕ: 27-04-2023ರಂದು ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಿಗೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಿಗೆ ವಿನಂತಿಸಿಕೊಂಡ ಮೇಲೆ ದಿನಾಂಕ:13-06-2023, 17-07-2023 ಮತ್ತು 24-07-2023ರಂದು ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ ಹಿನ್ನಲೆಯಲ್ಲಿ ದಿನಾಂಕ:20-09-2023ರಂದು ನಗರಾಭಿವೃದ್ದಿ ಇಲಾಖೆಯ ನಗರ ಸ್ಥಳೀಯ ಸಂಸ್ಥೆಗಳ ನಿವೃತ್ತ ಪೌರ ಸೇವಾ ನೌಕರರುಗಳಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ದಿನಾಂಕ:01-04-2023ರಿಂದ ಜಾರಿಗೆ ಬರುವಂತೆ ರಾಜ್ಯ ಸಂಚಿತ ನಿಧಿಯಿಂದ ಪಾವತಿಸಲು ಆದೇಶ ಮಾಡಿದ್ದು ಅದನ್ನು ಅನುಷ್ಠಾನಕ್ಕೆ ತರಲು ಪೌರಾಡಳಿತ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿತ್ತು, ಇದನ್ನು ಒಂದೇ ದಿನದಲ್ಲಿ ಅನುಷ್ಠಾನಗೊಳಿಸುವ ಪೌರಾಡಳಿತ ನಿರ್ದೇಶಕರಾದ ಎನ್.ಮಂಜುಶ್ರೀ ಇವರಿಗೂ ಮತ್ತು ವಿಶೇಷ ಕಾಳಜಿ ವಹಿಸಿರುವ ನಗರಾಭಿವೃದ್ದಿ ಕಾರ್ಯದರ್ಶಿಗಳಾದ ಡಾ. ಅಜಯ್ ನಾಗಭೂಷಣ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆಂದು ಅವರು ತಿಳಿಸಿದ್ದಾರೆ. ಸುಮಾರು 21000 ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.ಮುಂದೆ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಶಿಫಾಸ್ಸುಗಳನ್ನು ಅಂಗೀಕರಿಸಿ ಸರ್ಕಾರ ಮಂಜೂರು ಮಾಡಿದ ಮೇಲೆ, ಸರ್ಕಾರಿ ನೌಕರರಿಗೆ/ನಿವೃತ್ತಿ ನೌಕರರಿಗೆ ಹೊರಡಿಸುವ ಅದೇಶದಲ್ಲಿಯೇ ನಮ್ಮಗಳನ್ನು ಅದೇ ಆದೇಶದಲ್ಲಿಯೇ ಸೇರ್ಪಡೆ ಮಾಡಿ ಅನಗತ್ಯವಾಗಿ ರಾಜಧಾನಿಗೆ ಅಲೆದಾಡುವುಕ್ಕೆ ಕಡಿವಾಣ ಹಾಕಬೇಕಾಗಿ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾಚಾರ್ ಸರ್ಕಾರಕ್ಕೆ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.