i
ಪಿಕ್ ಅಪ್ ವಾಹನಗಳ ಚಾಲಕರ ಸಮಸ್ಯೆ ನಿವಾರಿಸಿದ ಕಾಂಗ್ರೆಸ್ ಮುಖಂಡರು ಮತ್ತು ಅರಣ್ಯಾಧಿಕಾರಿಗಳು…
ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವಂತಹ ವಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತಹ ಪ್ರವಾಸಿಗರ ತಾಣವಾದಂತಹ ಪಟ್ಲ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಂತಹ ಪಿಕ್ ಅಪ್ ಗಾಡಿಗಳನ್ನ ಅರಣ್ಯ ಇಲಾಖೆಯು ಸುಮಾರು ಎರಡು ತಿಂಗಳಿನಿಂದ ನಿಲ್ಲಿಸಿರುತ್ತದೆ ಇದರಿಂದ ಅದನ್ನೇ ನಂಬಿಕೊಂಡು ಜೀವನ ನಡೆಸಿದಂತಹ ಪಿಕ್ ಅಪ್ ಚಾಲಕರಿಗೆ ತುಂಬಾ ಸಮಸ್ಯೆ ಆಗಿರುತ್ತದೆ. ಈ ಸಮಸ್ಯೆಯನ್ನು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಬಳಿ ಎಲ್ಲಾ ಚಾಲಕರು ಬಂದು ಬೇರೆ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಸಕಲೇಶಪುರಕ್ಕೆ ಪ್ರವಾಸಿಗರು ಆಗಮಿಸಿದಾಗ ಅವರನ್ನು ಸುರಕ್ಷಿತವಾಗಿ ಸಕಲೇಶಪುರದ ಸೌಂದರ್ಯ ಮತ್ತು ಮಹತ್ವವನ್ನ ಪ್ರವಾಸಿಗರಿಗೆ ತಿಳಿಸುವುದನ್ನು ನಿಲ್ಲಿಸಿರುವುದು ಮತ್ತು ನಮ್ಮ ಜೀವನ ನಡೆಸುತ್ತಿರುವ ಮಾರ್ಗವನ್ನೇ ನಿಲ್ಲಿಸಿರುವುದರಿಂದ ತೊಂದರೆಯಾಗಿದೆ ಎಂದು ಚಾಲಕರು ಸಕಲೇಶಪುರ ತಾಲೂಕು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಉದಯ್ ಮತ್ತು ಉಪಾಧ್ಯಕ್ಷ ಮುರಳಿ ಮೋಹನ್ ರವರ ಬಳಿ ನೋವು ತೋಡಿಕೊಂಡಿದ್ದಾರೆ. ಚಾಲಕರುಗಳ ಕಷ್ಟವನ್ನು ಆಲಿಸಿದ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರಣ್ಣ, ಸಕಲೇಶಪುರ ತಾಲೂಕು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಚ್ ಎಚ್ ಉದಯ್, ಸಮಾಜಸೇವಕ ಕಾಂಗ್ರೆಸ್ ಮುಖಂಡ ಬಾಚಿಹಳ್ಳಿ ಪ್ರತಾಪ್ ಗೌಡ ರವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಅದರಂತೆ ಮುರಳಿ ಮೋಹನ್, ಉದಯ್ ರವರು ಅರಣ್ಯ ಇಲಾಖೆಯ ಡಿಎಫ್ಓ, ಎಸಿಎಫ್ ನೊಂದಿಗೆ ಮಾತುಕತೆ ನಡೆಸಿ ಪಟ್ಲಾ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಯಾವುದೇ ಸಮಸ್ಯೆ ಆಗದಂತೆ ಪಿಕ್ ಅಪ್ ಚಾಲಕರಿಗೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಅವರ ಮನವಿಗೆ ಒಪ್ಪಿ ಪಟ್ಲಾ ಬೆಟ್ಟಕ್ಕೆ ಪಿಕ್ ಅಪ್ ಗಳಿಗೆ ಚಲಿಸುವಂತೆ ಮಾರ್ಗವನ್ನು ಮಾಡಿಕೊಟ್ಟು ಅವರು ಬದುಕಿಗೆ ಒಂದು ದಾರಿಯನ್ನು ಮಾಡಿಕೊಟ್ಟಿದ್ದಾರೆ. ಚಾಲಕರ ಪರವಾಗಿ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಉದಯ್, ಪ್ರತಾಪ್ ಗೌಡ ರವರಿಗೆ ಚಾಲಕರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮುಂದಿನ ದಿನಗಳಲ್ಲಿ ಹೆತ್ತೂರು ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಿ ಬಲಪಡಿಸಲು ಮುಂದಾಗುತ್ತೆವೆ ಎಂದು ಅವರು ಭರವಸೆ ನೀಡಿದ್ದಾರೆ.