i
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಕ್ತಾರನಲ್ಲ-ಬಿಕೆ ಹರಿಪ್ರಸಾದ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೆಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ವಿಲನ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಲು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ನಿರಾಕರಿಸಿದ್ದಾರೆ.
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಕ್ತಾರನಲ್ಲ. ಕುಮಾರ್ ಸ್ವಾಮಿ ಬೆಂಬಲಿಗನೂ ಅಲ್ಲ, ಇದಕ್ಕೆ ನಾನು ಉತ್ತರ ನೀಡಲ್ಲ ಎಂದು ಕಡ್ಡಿ ಮುರಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕನಕಪುರ ಬೆಂಗಳೂರಿಗೆ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಹರಿ ಪ್ರಸಾದ್, ಆಡಳಿತಾತ್ಮಕ ಅನುಕೂಲ ನೋಡಿಕೊಂಡು ಜಿಲ್ಲೆಗಳನ್ನ ಮಾಡುತ್ತಾರೆ. ಇದು ಕೇವಲ ರಾಮನಗರಕ್ಕೆ ಸೀಮಿತವಲ್ಲ. ದೆಹಲಿ ಕೂಡಾ ಗ್ವಾಲಿಯರ್ ವರೆಗೂ ಬೆಳೆದಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರುಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಯಾರೊಬ್ಬರೂ ಹಣ ತಿನ್ನಲೂ ಆಗುವುದಿಲ್ಲ, ಇಸ್ಕೊಳ್ಬೋದು. ರಾಜಕೀಯದಲ್ಲಿ ಇರುವವರು ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ಸೂಚ್ಯವಾಗಿ ತಿಳಿಸಿದರು.
ಎರಡೂವರೆ ವರ್ಷದ ಬಳಿ ಸಂಪುಟ ರಚನೆ ಬಗ್ಗೆ ಗೊತ್ತಿಲ್ಲ. ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸುರ್ಜೆವಾಲ ವೇಣುಗೋಪಾಲ್ ಅವರಿಗೆ ಗೊತ್ತಿದೆ. ಅವರು ಮಾತ್ರ ಇದಕ್ಕೆ ಉತ್ತರ ನೀಡಬಹುದು ಅಷ್ಟೇ.
ಅಪರೇಷನ್ ಕಮಲ ಮಾಡಿದ್ದಕ್ಕೆ ಬಿಜೆಪಿ ಅವರನ್ನ ಮತದಾರರು ಮನೆಗೆ ಕಳಿಸಿದ್ದಾರೆ. ಮತ್ತೆ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುತ್ತಾರೆ ಎಂದು ಹರಿಪ್ರಸಾದ್ ವಿಶ್ವಾಸ ವ್ಯಕ್ತ ಪಡಿಸಿದರು.
ಸತೀಶ್ ಜಾರಕಿಹೊಳಿ ದುಬೈ ಟ್ರಿಪ್ ವಿಚಾರ ಕುರಿತು ಮಾತನಾಡಿದ ಅವರು
ಸತೀಶ್ ಜಾರಕಿಹೊಳಿ ದುಬೈ ಅಭಿವೃದ್ಧಿ ತೋರಿಸಲು ಮುಂದಾಗಿದ್ದಾರೆ. ಅವರದ್ದೇ ಜಿಲ್ಲೆಯ ಶಾಸಕರಿಗೆ ಮಾತ್ರ. ಮೂರನೇ ಬಣ ಎಂಬುದು ಸೃಷ್ಠಿಯಾಗಿದೆ. ತಪ್ಪು ಅರ್ಥ ಪಡೆಯಬಾರದು. ಬೆಳಗಾವಿ ಅಭಿವೃದ್ಧಿಗಾಗಿ ಈ ಪ್ರವಾಸ ಎಂದು ಬಿಕೆ ಹರಿಪ್ರಸಾದ್ ಹೇಳಿದರು.
ಗೋವಾ ರಾಜ್ಯದ ಗಡಿ ಜಿಲ್ಲೆಯಾಗಿರುವ ಕಾರಣ ಅಭಿವೃದ್ಧಿ ಚಿಂತನೆ ಮಾಡಿದ್ದಾರೆ. ಮೈಸೂರು ದಸರಾಗೆ ಎಲ್ಲರೂ ಕೂಡಾ ಹೋಗುತ್ತಾರೆ.
ಪ್ರತಿ ಬಾರಿ ಯಾರೂ ಹೋಗಲ್ಲ, ಕೆಲವರು ಮಾತ್ರ ಹೋಗುತ್ತಾರೆ. 135 ಮಂದಿ ಶಾಸಕರಿಗೂ ಶಕ್ತಿ ಇರುತ್ತದೆ. ಸಿಎಂ ಸ್ಥಾನಕ್ಕೆ ಆಸೆ ಪಡುವುದು ತಪ್ಪಲ್ಲ. ಮುಂದಿನ ಬಾರಿ ಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೇಗೆ ಹರಿಪ್ರಸಾದ್ ಹೇಳಿಕೆ.
ಸಿಎಂ ಸ್ಥಾನಕ್ಕಿಂತ ನಾನು ಉನ್ನತ ಹುದ್ದೆಯಲ್ಲಿದ್ದೆ. ನಾನು ಪಡೆದಿದ್ದು ಸಣ್ಣ ಸ್ಥಾನ ಯಾವುದು ಇಲ್ಲ. ನಾನು ಯಾವತ್ತೂ ಕೆಳ ಸ್ಥಾನದಲ್ಲಿ ಇಲ್ಲ. ಮುಖ್ಯಮಂತ್ರಿಗಿಂತ ಉನ್ನತ ಸ್ಥಾನದಲ್ಲಿ ಇದ್ದವನು ಎಂದು ಹರಿಪ್ರಸಾದ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಇದೆ. ಪ್ಯಾಶನ್ ಮಾಡಲು ವನ್ಯಜೀವಿ ಗಳ ಉಗುರು, ಕೂದಲು ಕಟ್ಟುವುದು ತಪ್ಪು. ಕಾನೂನು ರಕ್ಷಣೆ ಮಾಡುವವರೇ ಮೀರಿ ನಡೆದರೆ ಕ್ರಮ ಜರುಗಿಸಬೇಕು. ಯಾರು ಎಷ್ಟು ದೊಡ್ಡವರೇ ಇರಲಿ, ಯಾವುದೇ ಪಕ್ಷ ಇರಲಿ, ಹಿಂದೆ ಮುಂದೆ ನೋಡದೇ ಕ್ರಮ ಜರುಗಿಸಬೇಕು. ಪ್ರಾಣಿಗಳು ಕೂಡಾ ಜೀವಿಗಳೇ. ಹುಲಿ ಸಂರಕ್ಷಣೆಗೆ ಕೋಟಿ ಕೋಟಿ ಖರ್ಚು ಮಾಡಲಾಗುತ್ತದೆ. ಉಗುರು ಹಾಕಿಕೊಂಡು ಹುಲಿಗಳನ್ನ ಅಣುಕಿಸುತ್ತಿದ್ದೀರಾ?
ಸೆಲೆಬ್ರಿಟಿ ಆಗಲಿ ಯಾರೇ ಆಗಿರಲಿ ಹುಲಿ ಉಗುರು, ಕರಡಿ ಕೂದಲು, ಆನೆ ದಂಥ, ಹಾಕಿಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಹುಲಿ ಉಗುರು ಕುರಿತು ಪ್ರತಿಕ್ರಿಯೆ ನೀಡಿದರು.
ನವಿಲು ಗರಿಯನ್ನು ಪ್ರಧಾನಿ ಮೋದಿ ಕೂಡಾ ಧರಿಸಿದ್ದಾರೆ. ಹಾಗಂತ ಅವರನ್ನ ಬಂಧಿಸಲು ಆಗಲ್ಲ. ನವಿಲು ಗರಿಗೂ, ಪ್ರಾಣ ತೆಗೆಯುವುದಕ್ಕೂ ವ್ಯತ್ಯಾಸ ಇದೆ.
ನವಿಲು ಗರಿ ನೈಸರ್ಗಿಕವಾಗಿ ಸಿಗುತ್ತದೆ ಎಂದು ತಿಳಿಸಿದರು.