i
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಸಚಿವ ಸಂತೋಷ್ ಲಾಡ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: Minister Santosh Lad batted for Siddaramaiah…
ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲಾಡ್ ಅವರು, ಕಳೆದ ನಾಲ್ಕು ತಿಂಗಳಿಂದ ಇದೇ ಪ್ರಶ್ನೆ ಕೇಳುತ್ತಿದ್ದಿರಿ. ಕೈಮುಗಿದು ಕೇಳುತ್ತೇನೆ ಇದನ್ನ ಕೈಬಿಡಬೇಕಿದೆ. ಹೈಕಮಾಂಡ್ & ಎಂಎಲ್ಎ ಗಳು ನಿರ್ಧಾರ ಮಾಡುತ್ತಾರೆ. ಇದೆಲ್ಲಾ ಹೈಕಮಾಂಡ್ ಹಂತದಲ್ಲಿ ಚರ್ಚೆ ನಡೆಯುತ್ತದೆ. ಸಿಎಂ ಹೇಳಿದ್ದು ಐದು ವರ್ಷ ಕಂಟಿನ್ಯೂ ಎಂದಿದ್ದಾರೆ. ಯಾವುದೇ ಬದಲಾವಣೆ ಇದ್ದರು ಹೈಕಮಾಂಡ್ ಮಾಡಬೇಕಿದೆ. ಸಿಎಂ ಸಿದ್ದರಾಮಯ್ಯ 2.5 ವರ್ಷ ಸಿಎಂ ಎಂಬ ವಿಚಾರಕ್ಕೆ ತೆರೆ ಎಳೆದಿದ್ದಾರೆ ಎಂದು ತಿಳಿಸಿದರು.
ಪುನಃ ಮತ್ತೆ ನಮಗೆ ಪ್ರಶ್ನೆ ಮಾಡುವುದು ಅಗತ್ಯವಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಅವರವರ ಅಭಿಪ್ರಾಯ ಹೇಳಿದ್ದಾರೆ. ಪಕ್ಷದಲ್ಲಿ ಗೊಂದಲ ಇಲ್ಲ, ಅಭಿಪ್ರಾಯ ಇದೆ. ಬಿಜೆಪಿ ಅವರಿಗೆ ಅಪರೇಷನ್ ಕಮಲ ಅವ್ಯಾಸವಾಗಿದೆ.
ಇಡಿ, ಸಿಬಿಐ ಇತರೆ ತನಿಖಾ ಸಂಸ್ಥೆಗಳನ್ನು ಬಳಸಿ ಸರ್ಕಾರ ಕೆಡವುತ್ತಾರೆ ಎಂದು ಬಿಜೆಪಿ ವಿರುದ್ಧ ಸಂತೋಶ್ ಲಾಡ್ ವಾಗ್ದಾಳಿ ಮಾಡಿದರು.
ಯಾವುದೇ ಪ್ರಕರಣ ಇರುವ ವ್ಯಕ್ತಿ ಬಿಜೆಪಿಗೆ ಹೋದರೆ ವಾಷಿಂಗ್ ಪೌಡರ್ ನಿರ್ಮಾ ಬಳಸಿದಂತೆ ಆಗಲಿದೆ. ಅಂತಹ ವ್ಯಕ್ತಿಗಳು ಶುದ್ಧವಾಗಲಿದ್ದಾರೆ. ನನ್ನ ಬಳಿ ಈ ಕುರಿತು ಊಹಾಪೋಹಗಳ ಮಾಹಿತಿ ಇದೆ ಎಂದು ಹೇಳಿದರು.
ವಸೂಲಿಗೆ ಹೈಕಮಾಂಡ್ ನಾಯಕರು ಬಂದಿದ್ದಾರೆಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಲಾಡ್ ಅವರು, ಕುಮಾರಣ್ಣ ನಿತ್ಯವೂ ಹೇಳ್ತಾ ಇದ್ದಾರೆ, ಅವರ ವಿರುದ್ದ ಏನೂ ಹೇಳಲಿ. ಬಿಜೆಪಿ ವಿರುದ್ದ ಮೊದಲು ಮಾತನಾಡುತ್ತಿದ್ದರು. ಈಗ ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಅವರಿಗೆ ಹೇಗೆ ಬೇಕೋ ಆಗೆ ಮಾತನಾಡಲಿ. ಬಿಜೆಪಿ ಜೊತೆಗೆ ಮೈತ್ರಿ ಆಗಿದ್ದು, ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಶಿಕ್ಷಣದ ಮೇಲೆ ಶೇ.18 ಜಿಎಸ್ ಟಿ ಇದೆ. ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಈ ರೀತಿ ಇಲ್ಲ. ರೈತರ ಆತ್ಮಹತ್ಯೆಗಳ ಕುರಿತು ಚರ್ಚೆ ಇಲ್ಲ. ಬೆಲೆ ಏರಿಕೆ ಕುರಿತು ಚರ್ಚೆ ನಡೆಸುತ್ತಿಲ್ಲ. 56 ರೂ ಡಾಲರ್ ನಿಂದ 84 ರೂ.ಗೆ ಆಗಿದೆ ಈ ಕುರಿತು ಚರ್ಚೆ ಇಲ್ಲ. ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದೆ ಚರ್ಚೆ ಇಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಲಾಡ್ ವಾಗ್ದಾಳಿ ಮಾಡಿದರು.
ರಾಜ್ಯದ ಬರ ಕುರಿತು ಚರ್ಚೆ ಕೂಡಾ ನಡೆಯಲಿ. ಕೇಂದ್ರಕ್ಕೆ ಬರ ಪರಿಹಾರ ನೆರವು ನೀಡಲು ಮನವಿ ಮಾಡಿದ್ದೇವೆ. ಆಪರೇಷನ್ ಕಮಲ ಬಿಟ್ಟು ಕೇಂದ್ರದಿಂದ ಹಣ ತರಲಿ. ಬಿಜೆಪಿ ನಾಯಕರು ಬರ ಅಧ್ಯಯನ ಮಾಡುವುದನ್ನು ಬಿಟ್ಟು ಹಣ ನೀಡಬೇಕು. ಪುಕ್ಸಟ್ಟೆ ಬಾಷಣ ಬಿಟ್ಟು, ಪ್ರಧಾನಿ ಅವರು ಬರ ಪರಿಹಾರದ ಹಣ ನೀಡಬೇಕು. ಪಬ್ಲಿಸಿಟಿ ಬಿಟ್ಟು ಮಿಡಿಯಾ ಮುಂದೆ ಒಂದು ಗಂಟೆ ಕುಳಿತು ಚರ್ಚೆ ಮಾಡಲಿ. ವಿಶ್ವಗುರುಗಳು ಟೀ ಕುಡಿಯುತ್ತಾ ಚರ್ಚೆ ಮಾಡಲಿ ಎಂದು ತಾಕೀತು ಮಾಡಿದರು.
ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯ ಹೇಳಿದ್ದಾರೆ. ಸಿಎಂ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾನು ಸಿಎಂ ರೇಸ್ ನಲ್ಲಿ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ. ಇದಕ್ಕೆ ಶೇ.100 ನನ್ನ ಸಮ್ಮಿತಿ ಇದೆ. ಪಕ್ಷ ಬದಲಾವಣೆ ಮಾಡಿದ್ರೆ ಮಾತ್ರ ನೋಡೋಣಾ. ಮುಖ್ಯಮಂತ್ರಿಗಳ ಯಾವುದೇ ಬದಲಾವಣೆ ಇದ್ದರೂ ಕೂಡಾ ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಣ್ಣಪುಟ್ಟ ವ್ಯತ್ಯಾಸಗಳು ಪಕ್ಷದಲ್ಲಿ ಇರ್ಬೋದು ಅಷ್ಟೇ ಎಂದು ಅವರು ಹೇಳಿದರು.