i
ಸಂತ್ರಸ್ತ ಬಾಲಕಿಯರ ಪರವಾಗಿ ಹೋರಾಟ ಮುಂದುವರೆಯುತ್ತದೆ- ಸೌಭಾಗ್ಯ ಬಸವರಾಜನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: Struggle will continue on behalf of victimized girls – Saubhagya Basavarajan…
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳು ನೀಡಿದ ಮುರುಘಾ ಶರಣರ ವಿರುದ್ದ ನಾವು ಪಿತೂರಿ ಮಾಡಿದ್ದೇವೆಂದು ನಮ್ಮ ವಿರುದ್ಧ ಪೊಲೀಸರು ಕೇಸ್ ಹಾಕಿದ್ದು ಆ ಕೇಸ್ ಅನ್ನು ಹೈಕೋರ್ಟ್ ರದ್ದು ಮಾಡುವ ಮೂಲಕ ನಮ್ಮ ಆತ್ಮಸ್ಥೈರ್ಯ ಮತ್ತೊಷ್ಟು ಹೆಚ್ಚಿದೆ. ಸಂತ್ರಸ್ತ ಬಾಲಕಿಯರಿಗೆ ನ್ಯಾಯ ದೊರೆಯುವ ತನಕ ಹೋರಾಟ ಮಾಡುವುದಾಗಿ ಮಾಜಿ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಮತ್ತು ನನ್ನ ಪತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ನಮ್ಮಿಬ್ಬರಿಗೆ ಯಾವುದೇ ನೋವಿಲ್ಲ. ಆದರೆ ನಮ್ಮ ಜೊತೆಗೆ ನಮ್ಮ ಬೆಂಬಲಿಗರಿಗೂ ಪೊಲೀಸರು ಹಿಂಸೆ ನೀಡಿದ್ದರು. ಇದು ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಬಸವರಾಜೇಂದ್ರ ಯಾರು ಎಂದು ಪರಿಚಯ ಕೂಡಾ ನಮಗಿಲ್ಲ. ಅನಗತ್ಯ ತೊಂದರೆ ನೀಡಲು ಆಡಿಯೋ ಬಂತು. ಉದ್ದೇಶ ಪೂರ್ವಕವಾಗಿ ಆಡಿಯೋ ಮಾಡಿ ಹರಿಬಿಟ್ಟಿದ್ದರು. ನಾವು ಸಂತ್ರಸ್ತ ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂದು ಬೆಂಬಲ ನೀಡಿದ್ದೇವೆ. ಉದ್ದೇಶ ಪೂರ್ವಕವಾಗಿ ತೊಂದರೆ ನೀಡಿದರು. ನಮ್ಮ ಸುತ್ತಮುತ್ತ ಜನರಿಗೆ ಟಾರ್ಚರ್ ಮಾಡಿದರು ಎಂದು ಸೌಭಾಗ್ಯ ಕಿಡಿ ಕಾರಿದರು. ಸಂತ್ರಸ್ತ ಬಾಲಕಿಯರ ಪರ ನಿಂತಿದ್ದಕ್ಕೆ ಪೊಲೀಸ್ ಇಲಾಖೆ ನಮಗೆ ಬೆಂಬಲ ನೀಡಬೇಕಿತ್ತು. ಆದರೆ ಪೊಲೀಸರು ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿ ಜೈಲಿಗೆ ಹಾಕುವ ಮೂಲಕ ಸಾಕಷ್ಟು ತೊಂದರೆ ನೀಡಲಾಯಿತು. ಸತ್ಯಕ್ಕೆ ಇಂದು ಜಯ ಸಿಕ್ಕಿದೆ, ಮುರುಘೇ ನಮಗೆ ನ್ಯಾಯ ಕೊಡಿಸಿದ್ದಾನೆ. ಸಂತ್ರಸ್ತರ ಪರವಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸೌಭಾಗ್ಯ ಬಸವರಾಜನ್ ಘೋಷಿಸಿದರು.