i
ನೂತನ ಶಿಕ್ಷಣ ನೀತಿ ವರದಿ ಪರಿಶೀಲನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Review of the new education policy report…
ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹೇಗೆ ರೂಪಿಸಬೇಕು ಎಂಬುದರ ಕುರಿತು ನೂತನ ಶಿಕ್ಷಣ ನೀತಿಯನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಪ್ರೊಫೆಸರ್ ಸುಖದೇವ್ ತೋರಟ್ ಅವರು ತಿಳಿಸಿದರು.
ನಗರದ ಉನ್ನತ ಶಿಕ್ಷಣ ಪರಿಷತ್ನ ಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಆಯೋಗವನ್ನು ನೇಮಿಸಲಾಗಿದ್ದು, ಆಯೋಗವು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಮಗ್ರ ಪರಿಶೀಲನೆ, ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಶೈಕ್ಷಣಿಕ ದಾಖಲಾತಿ ಕುರಿತು ಮಾಹಿತಿ ಸಂಗ್ರಹಣೆ ಹಾಗೂ ಪರಿಶೀಲನೆ ಮಾಡುವುದು ಸೇರಿದಂತೆ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಶೈಕ್ಷಣಿಕವಾಗಿ ದಾಖಲಾಗುವ ಕುರಿತು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ವಿಧಿವಿಧಾನಗಳನ್ನು ರೂಪಿಸಿ, ಶಿಕ್ಷಣದ ಬಹುಪಾಲು ಅಂಶಗಳ ಬಗ್ಗೆ ಚರ್ಚೆ ಮಾಡಲು, ಸದಸ್ಯರು ಹಾಗೂ ಪರಿಣಿತರ ಅಭಿಪ್ರಾಯಗಳನ್ನು ಪಡೆದು, ಯಾವುದೇ ಕಲ್ಪನೆಗೆ ಅಸ್ಪದ ನೀಡದೇ ವಾಸ್ತವ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಸಮಗ್ರ ಪರಿಶೀಲನೆ ಮಾಡಲು ಉಪಸಮಿತಿಗಳನ್ನು ರಚಿಸಿದ್ದು, ಆಡಳಿತ, ಗುಣಮಟ್ಟ ಶಿಕ್ಷಣ, ಸಿಬ್ಬಂದಿ, ಹಣಕಾಸು ಇತ್ಯಾಧಿಗಳ ಕುರಿತು ಉಪಸಮಿತಿಗಳು ನೀಡುವ ಮಾಹಿತಿಯ ಆಧಾರದ ಮೇಲೆ ಚರ್ಚೆ ನಡೆಸಿ ವರದಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ರಾಜ್ಯದ ನಾಲ್ಕು ವಿಭಾಗಳಗಳಲ್ಲಿ ಕುಲಪತಿಗಳು, ಮಾಜಿ ಕುಲಪತಿಗಳು, ಶಿಕ್ಷಕರ ಸಂಘ, ವಿದ್ಯಾರ್ಥಿಗಳ ಸಂಘ ಚರ್ಚೆ ನಡೆಸಿ ಅನುಭವ, ಸಮಸ್ಯೆ, ಅಭಿಪ್ರಾಯಗಳನ್ನು ಕ್ರೋಢಿಕರಿಸಲು ಸಮಿತಿಯ ರಚನೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸುದರ್ಶನ್ ಭೂಷಣ್, ಪ್ರೊ. ಜಾಫೆಟ್ ಹಾಗೂ ಪ್ರೊ.ರಾಜೇಂದ್ರ ಉಪಸ್ಥಿತರಿದ್ದರು.