i
ನದಾಫ್ ಪಿಂಜಾರ ಸಂಘದ ಅಧ್ಯಕ್ಷರಾಗಿ ಉಸ್ಮಾನ್ ಸಾಬ್ ಅವಿರೋಧ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ತಾಲೂಕ್ ಅಧ್ಯಕ್ಷರಾಗಿ ಉಸ್ಮಾನ್ ಸಾಬ್ ಕರ್ಕಿಹಳ್ಳಿ, ಉಪಾಧ್ಯಕ್ಷರಾಗಿ ಫಕ್ರು ಸಾಬ್ ನದಾಫ್ ಚುಕ್ಕನ್ಕಲ್, ಮುರ್ತುಜಾ ಸಾಬ್ ಚುಟ್ಟದ್, ಮೀರಾ ಸಾಬ್ ಬನ್ನಿಗೋಳ, ಮಹಿಳಾ ಉಪಾಧ್ಯಕ್ಷೆಯಾಗಿ ಜರೀನಾ ಬೇಗಂ ಗಂಡ ರಶೀದ್ ಅಹಮದ್ ನೀರಲ್ಗಿ, ಮುಖ್ಯ ಕಾರ್ಯದರ್ಶಿಗಳಾಗಿ ಮುಸ್ತಫಾ ಕುದರಿಮೂತಿ, ಖಜಾಂಚಿಯಾಗಿ ಮರ್ದಾನ್ ಸಾಬ್ ಲುಂಗಿ, ಜಿಲ್ಲಾ ಪ್ರತಿನಿಧಿಗಳಾಗಿ ಶಾಬುದ್ದೀನ್ ಸಾಬ್ ನೂರ್ ಬಾಷಾ ಕುಕನೂರು, ಅಲ್ಲಿ ಸಾಬ್ ಗಬ್ಬೂರ್, ರಂಜಾನ್ ಸಾಬ್ ಕಂಬಳಿ, ಸಂಘಟನಾ ಕಾರ್ಯದರ್ಶಿಯಾಗಿ ಖಾಜಾವಲಿ ಮಂಗಳಾಪೂರ ಮುಂತಾದವರು ಅವಿರೋಧವಾಗಿ ಆಯ್ಕೆಯಾದರು.
ಕೊಪ್ಪಳ ತಾಲೂಕ್ ಹಾಗೂ ನಗರ ಘಟಕದ ಆಜೀವ ಸದಸ್ಯತ್ವ ಹೊಂದಿದ ಮತದಾರರು “ಕೊಪ್ಪಳ ನಗರದ ಹಜರತ್ಮರ್ದಾನ್ ಎ ಗೈಬ್ ದರ್ಗಾ ಶರೀಫ್” ಆವರಣದಲ್ಲಿ ರಾಜ್ಯ ಘಟಕದ ಸೂಚನೆಯಂತೆ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಸಭೆಯಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ರೇಷ್ಮಾ ಖಾಜಾವಲಿ ಬನ್ನಿಕೊಪ್ಪ, ತಾಲೂಕ್ ಮಾಜಿ ಅಧ್ಯಕ್ಷ ಅಲ್ಲಿ ಸಾಬ್ ಗೂಂದಿ ಹೊಸಳ್ಳಿ ಸೇರಿದಂತೆ ಹಿರಿಯ ಕಿರಿಯ ಮುಖಂಡರ ಮಾರ್ಗದರ್ಶನದಂತೆ ಸೌಹಾರ್ದತೆಯಿಂದ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿತು ಎಂದು ಸಂಘದ ಪ್ರಕಟಣೆ ತಿಳಿಸಿದೆ.