i
ತಾಜ್ ವೆಸ್ಟ್ ಎಂಡ್ ನಲ್ಲಿ ಕಾಂಗ್ರೆಸ್ ಗೆ ಏನು ಕೆಲಸ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಾಜ್ ವೆಸ್ಟ್ ಎಂಡ್ ವಾಸ್ತವ್ಯ ಎಂದು ಕುಮಾರಸ್ವಾಮಿ ಮೂದಲಿಸುತ್ತಿದ್ದ ಕೈ ನಾಯಕರು ಈಗ ಯಾವ ಪುರುಷಾರ್ಥಕ್ಕೆ ಅಲ್ಲಿಗೆ ಹೋಗಿದ್ದಾರೆ ? ಎಟಿಎಮ್ ಸರ್ಕಾರದ ದುಡ್ಡನ್ನೆಲ್ಲ ಕರ್ನಾಟಕ ಕಾಂಗ್ರೆಸ್ ಪಕ್ಷವು ಹೈಕಮಾಂಡ್ಪಾದಗಳಿಗೆ ಸುರಿಯುವ ಕಾರ್ಯಕ್ರಮವಿರಬೇಕು ಎಂದು ಜೆಡಿಎಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ಕರ್ನಾಟಕದ ಖಜಾನೆಯಿಂದ ಪಂಚರಾಜ್ಯಗಳ ಚುನಾವಣೆಗೆ ಹಣ ಸಾಗಿಸುವ ಬಗ್ಗೆ ಚರ್ಚೆ ಮಾಡಲು ಹೋಗಿರಬೇಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈಗ ತಾವು ಯಾವ ಘನಂದಾರಿ ರೆಸಾರ್ಟ್ ರಾಜಕೀಯದ ಚರ್ಚೆ ನಡೆಸುತ್ತಿದ್ದೀರಾ ? ಎಂದು ಜೆಡಿಎಸ್ ಪ್ರಶ್ನಿಸಿದೆ.