i
ಬಾಲ ಕಾರ್ಮಿಕ ನಿಷೇಧ ಕುರಿತು ಜಾಗೃತಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಷ್ಟವ್ಯಾಪಿ ಬಾಲಕಾರ್ಮಿಕ ರಕ್ಷಣೆ ಹಾಗೂ ಪುರ್ನಸತಿ ಅಭಿಯಾನದ ಅಂಗವಾಗಿ ಬುಧವಾರ ಹಿರಿಯೂರು ನಗರ ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕ ನಿಷೇದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಹೋಟೆಲ್, ಗ್ಯಾರೇಜ್, ಬೇಕರಿ ಅಂಗಡಿಗಳ ಮೇಲೆ ಬಾಲ್ಯಾವಸ್ಥೆ ಹಾಗೂ ಕಿಶೋರವಸ್ಥೆ ಕಾರ್ಮಿಕ ನಿಷೇಧ 1986 ರ ಕಾಯಿದೆ ಅಡಿ ಅನಿರೀಕ್ಷಿತ ಭೇಟಿ ನೀಡಿ ಸ್ಟಿಕರ್ಸ್ ಹಾಗೂ ಕರಪತ್ರಗಳನ್ನು ಸಂಸ್ಥೆಯ ಮಾಲೀಕರಿಗೆ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುಲಾಯಿತು. ಈ ಸಂದರ್ಭದಲ್ಲಿ ಹಿರಿಯೂರು ಕಾರ್ಮಿಕ ನಿರೀಕ್ಷಕ ಅಲ್ಲಾಬಕ್ಷ್, ರು, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಯೋಜನ ನಿರ್ದೇಶಕ ಪಿ ಸತೀಶ್ ಕುಮಾರ್, ಪೊಲೀಸ್ ಸಿಬ್ಬಂದಿ ತಿಮ್ಮಾರೆಡ್ಡಿ ಹಾಜರಿದ್ದರು.