i
ಡಿ.07 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಡಿಸೆಂಬರ್ ೦೭ ರಂದು ಬೆಳಿಗ್ಗೆ ೧೦.೩೦ಕ್ಕೆ ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣ ಸಭಾಂಗಣದಲ್ಲಿ ೨೦೨೩-೨೪ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಜಾನಪದ ನೃತ್ಯ ಹಾಗೂ ಗೀತೆ ಗಾಯನ ಸ್ಪರ್ಧೆಯಲ್ಲಿ ವೈಯಕ್ತಿಕ ಹಾಗೂ ೧೦ ಜನರ ತಂಡವಾಗಿ ಪಾಲ್ಗೊಳ್ಳಬಹುದು. ವೈಯಕ್ತಿಕ ಸ್ಪರ್ಧೆಗೆ ೭ ನಿಮಿಷ ಹಾಗು ಗುಂಪು ಸ್ಪರ್ಧೆಗೆ ೧೫ ನಿಮಿ? ಕಾಲವಕಾಶ ನೀಡಲಾಗುವುದು. ಇದರೊಂದಿಗೆ ನಿಯಮಗಳಿಗೆ ಒಳಪಟ್ಟು ಕಥೆ ಬರವಣಿಗೆ, ಪೋಸ್ಟರ್ ಮೇಕಿಂಗ್, ಭಾಷಣ ಹಾಗೂ ಛಾಯಚಿತ್ರ ಸ್ಪರ್ಧೆಗಳು ಜರುಗಲಿವೆ. ಚಿತ್ರದುರ್ಗ ಜಿಲ್ಲೆಯ ೧೫ ರಿಂದ ೨೯ ವ?ದ ಒಳಗಿನವರು ಮಾತ್ರ ಪಾಲ್ಗೊಳ್ಳು ಅವಕಾಶವಿದ್ದು, ಕಡ್ಡಾಯವಾಗಿ ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಇತರೆ ಜನ್ಮದಿನಾಂಕ ದೃಢೀಕರಣ ಪತ್ರ ಹಾಜರು ಪಡಿಸಬೇಕು. ಸ್ಪರ್ಧೆಗಳು ಬೆಳಗ್ಗೆ ೧೦.೩೦ ರಿಂದ ಪ್ರಾರಂಭವಾಗಲಿರುವುದರಿಂದ ೧೦ ಗಂಟೆಯ ಒಳಗಾಗಿ ಸ್ಪರ್ಧಾಳುಗಳೂ ವರದಿ ಮಾಡಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ರಾಜ್ಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಭಾಗವಹಿಸಬಹುದು. ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದು. ಯುವಜನೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿಸುವವರಿಗೆ ತಾಲ್ಲೂಕು ಕೇಂದ್ರಸ್ಥಾನದಿಂದ ಜಿಲ್ಲಾ ಕೇಂದ್ರಸ್ಥಾನಕ್ಕೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ನೀಡಲಾಗುವುದು. ಮಟ್ಟದ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಸ್ಪರ್ಧಾಳುಗಳು ಭಾಗವಹಿಸಿ ಈ ಅವಕಾಶವ ಉಪಯೋಗಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ ೦೮೧೯೪-೨೩೫೬೩೫ ಗೆ ಸಂಪರ್ಕಿಸಬಹುದು.