![](https://www.chandravallinews.com/wp-content/uploads/2023/12/WhatsApp-Image-2023-12-05-at-6.53.08-AM-1024x917.jpeg)
i
ಅಕ್ರಮ ಗಣಿಗಾರಿಕೆ 15 ಕೆಜಿ ಕೊರ್ಯಾಂಡಂ ಖನಿಜ ವಶ ಆರೋಪಿಗಳ ವಿರುದ್ಧ ಎಫ್ಐಆರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಕಷ್ಟು ಬೇಡಿಕೆ ಇರುವ ಕೊರ್ಯಾಂಡಂ ಖನಿಜವನ್ನು ಅಕ್ರಮವಾಗಿ ತೆಗೆಯುತ್ತಿದ್ದ ಪ್ರದೇಶಕ್ಕೆ ಗಣಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಹಲವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿ ಗ್ರಾಮದ ಜಮೀನು ಒಂದರಲ್ಲಿ ಅಕ್ರಮ ಗಣಿಗಾರಿಕೆಗಾರಿಕೆ ನಡೆಯುತ್ತಿದ್ದು ಖಚಿತ ಮಾಹಿತಿ ಮೇರೆಗೆ ಗಣಿ ಇಲಾಖೆ ಮತ್ತು ಪೊಲೀಸರ ದಾಳಿ ಮಾಡಿ 15 ಕೆಜಿ ಕೊರ್ಯಾಂಡಂ ಖನಿಜ, 1ಇಟಾಚಿ, 1ಓಮಿನಿ ವ್ಯಾನ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.ಜಮೀನು ಮಾಲೀಕರಾದ ರಾಘವೇಂದ್ರ, ರಾಜೇಶ್, ಮಡಿಕೇರಿಯ ರಾಶಿಕ್ ಭಾಷಾ ಮತ್ತು ಇತರರ ವಿರುದ್ಧ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.