i
ಡಿ.07ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24ನೇ ಸಾಲಿನ ಚಿತ್ರದುರ್ಗ ಜಿಲ್ಲಾಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆಯನ್ನು ಇದೇ ಡಿಸೆಂಬರ್ 7ರಂದು ಬೆಳಿಗ್ಗೆ 10.30ಕ್ಕೆ ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು 15 ರಿಂದ 29 ವರ್ಷ ಒಳಗಿನವರಾಗಿದ್ದು, ಕಡ್ಡಾಯವಾಗಿ ಜನ್ಮ ದಿನಾಂಕ ದಾಖಲೆಯೊಂದಿಗೆ (ಎಸ್ಎಸ್ಎಲ್ಸಿ ಅಂಕಪಟ್ಟಿ ಜನ್ಮದಿನಾಂಕ ದೃಢೀಕರಣ ಪತ್ರ) ಭಾಗವಹಿಸಬಹುದು. ದಾಖಲೆಗಳನ್ನು ತರದೇ ಇರುವವರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿರುವವರು ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ.
ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು, ಪ್ರಥಮ ಸ್ಥಾನ ರೂ.500, ದ್ವಿತೀಯ ಸ್ಥಾನ ರೂ.300 ಹಾಗೂ ತೃತೀಯ ಸ್ಥಾನ ರೂ. 250 ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ರಾಜ್ಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ಭಾಗವಹಿಸಬಹುದಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘ ಸಂಸ್ಥೆಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಸ್ಪರ್ಧಾಳುಗಳು ಭಾಗವಹಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ತಿಳಿಸಲಾಗಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿಸುವವರಿಗೆ ತಾಲ್ಲೂಕು ಕೇಂದ್ರಸ್ಥಾನದಿಂದ ಜಿಲ್ಲಾ ಕೇಂದ್ರಸ್ಥಾನಕ್ಕೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ನೀಡಲಾಗುವುದು.
ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳ ವಿವರ: ಜಾನಪದ ನೃತ್ಯ (ತಂಡ) (ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿರಬೇಕು) 10 ಜನ ಸಮಯ 15 ನಿಮಿಷ, ಜಾನಪದ ಗೀತೆ (ತಂಡ) (ಕನ್ನಡ ಆಂಗ್ಲ ಹಿಂದಿ ಭಾಷೆಯಲ್ಲಿರಬೇಕು) 10 ಜನ ಸಮಯ 7 ನಿಮಿಷ, ಜನಪದ ನೃತ್ಯ (ವೈಯುಕ್ತಿಕ) (ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿರಬೇಕು) ಸಮಯ 7 ನಿಮಿಷ, ಜನಪದ ಗೀತೆ (ವೈಯುಕ್ತಿಕ) ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿ) ಸಮಯ 7 ನಿಮಿಷ, ಕಥೆ ಬರೆಯುವುದು (ವೈಯುಕ್ತಿಕ), ಸ್ಟೋರಿ ರೈಟಿಂಗ್ (1000 ಪದಗಳಿಗೆ ಮೀರದಂತೆ) ಕನ್ನಡ ಆಂಗ್ಲ ಹಿಂದಿ ಭಾಷೆಯಲ್ಲಿರಬೇಕು. ವಿಷಯವು ಆಕ್ರಮಣಕಾರಿಯಾಗಿರಬಾರದು, ಈಗಾಗಲೇ ಪ್ರಕಟವಾಗಿರಬಾರದು, ಸ್ಪಷ್ಟವಾಗಿರಬೇಕು, ಜಾತಿ ಪಂಥ ಧರ್ಮ ವರ್ಣ ಜನಾಂಗವನ್ನು ಒಳಗೊಂಡಿರಬಾರದು ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು ಸಮಯ 60 ನಿಮಿಷ, ಪೋಸ್ಟರ್ ಮೇಕಿಂಗ್ (ಭಿತ್ತಿ ಪತ್ರ ತಯಾರಿಕೆ) (ವೈಯುಕ್ತಿಕ) ಪೋಸ್ಟರ್ A3 Size i.e., 11.7 x 1Q-5 ಕನ್ನಡ, ಆಂಗ್ಲ, ಹಿಂದಿ ಭಾಷೆಯಲ್ಲಿರಬೇಕು. ಭಿತ್ತಿಪತ್ರವು ಯಾವುದೇ ಸಂಸ್ಥೆಯನ್ನು ಅಥವಾ ಬ್ರಾಂಡ್ ಹೆಸರು ಪ್ರತಿನಿಧಿಸುತ್ತಿರಬಾರದು ಸ್ಪರ್ಧಿಗಳು ತಾವು ಸಲ್ಲಿಸುವ ಭಿತ್ತಿಪತ್ರವು 20- 30 ಪದಗಳೊಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು. ಸಮಯ 90 ನಿಮಿಷ ನಿಗಧಿಪಡಿಸಲಾಗಿದೆ.
Declamation (ಘೋಷಣೆ) ಭಾಷೆ: ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಇರಬೇಕು (ರಾಷ್ಟ್ರಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು) ಕನ್ನಡ ಭಾಷೆಯನ್ನು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಮಾತ್ರ ಸೀಮಿತಗೊಳಿಸಿದೆ. ಸ್ಪರ್ಧಿಗಳು ಸಿದ್ಧಪಡಿಸಿಕೊಂಡಿರುವ ಆಯ್ಕೆ ವಿಷಯಗಳ ಬಗ್ಗೆ ಭಾಷಣ ಮಾಡಬೇಕು ತೀರ್ಮಾನವು, ಭಾಷಣದ ನಿಖರತೆ, ಹರಿವು, ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸುವ ಪಾಯಿಂಟ್ಸ್ ಗಳು, ಶಬ್ದ, ಪದಗಳು, ಪುನರಾವರ್ತನೆ ಆಗದಿರುವುದು, ವಿಷಯದ ಬಗ್ಗೆ ಅರಿವು ಮತ್ತು ಆತ್ಮವಿಶ್ವಾಸ ಹೊಂದಿರುವುದರ ಮೇಲೆ ಅವಲಂಭಿಸಿರುತ್ತದೆ.
ಛಾಯಾಚಿತ್ರಣ (ವೈಯುಕ್ತಿಕ) photography) (Prrotographs in etectronic mode) ವಿಷಯಗಳನ್ನು ಒಂದನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು, ಮೊಬೈಲ್ನಿಂದ ತೆಗೆದ ಚಿತ್ರಗಳನ್ನು ಸಹ ಪರಿಗಣಿಸಬಹುದಾಗಿದೆ. (ವಿಷಯ) ಪ್ರಗತಿಶೀಲ ಭಾರತ, ಆತ್ಮನಿರ್ಭರ ಭಾರತ, ಯೋಗ, ಕ್ರೀಡೆ, ಫಿಟ್ನೆಸ್ಗಾಗಿ ದೈಹಿಕ ಚಟುವಟಿಕೆ, ಪ್ರಕೃತಿ ದೃಶ್ಯಗಳು, ಸ್ಪರ್ಧಿಗಳು ತಾವು ಸಲ್ಲಿಸುವ ಭಿತ್ತಿಪತ್ರವು 20-30 ಪದಗಳೊಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 08194-235635 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.