![](https://www.chandravallinews.com/wp-content/uploads/2023/12/WhatsApp-Image-2023-12-04-at-9.01.31-PM.jpeg)
i
1800 ಪರವಾನಿಗೆ ಭೂಮಾಪಕರ ನೇಮಕ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ ಸುವರ್ಣಸೌಧ:
1800 ಪರವಾನಿಗೆ ಭೂಮಾಪಕರ ನೇಮಕ: ಪೋಡಿ ಮುಕ್ತ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಗಮನಕ್ಕಿದ್ದು, 1800 ಪರವಾನಿಗೆ ಭೂಮಾಪಕರನ್ನು ತೆಗೆದುಕೊಳ್ಳಲಾಗಿದೆ;ಈಗ ಅವರಿಗೆ ತರಬೇತಿ ನೀಡಲಾಗುತ್ತಿದ್ದು,ಜನೆವರಿಯಲ್ಲಿ ಅವರಿಗೆ ಈ ಕಾರ್ಯಗಳನ್ನು ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದರು.
ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಪೋಡಿ ಬಾಕಿ ಇವೆ ಎಂಬುದರ ಆಧಾರದ ಮೇಲೆ ಪರವಾನಿಗೆ ಭೂಮಾಪಕರನ್ನು ಆಯಾ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ ಅವರು 364 ಭೂಮಾಪಕರು ಮತ್ತು 28 ಎಡಿಎಲ್ಆರ್ಗಳನ್ನು ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.