i
ಮಾನವ ಹಕ್ಕುಗಳನ್ನು ವಿದ್ಯಾರ್ಥಿನಿಯರು ತಿಳಿಯಬೇಕು-ಕೃಷ್ಣ ಈಳಗೇರ…
ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಮಾನವ ಹಕ್ಕುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಯುವ ವಕೀಲ ಕೃಷ್ಣ ಈಳಗೇರ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಯ ಹಿಂಭಾಗದ ಸಖಿ ಒನ್ ಸ್ಟಾಪ್ ಸೆಂಟರನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಕೊಪ್ಪಳ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ, ಸಖಿ ಒನ್ ಸ್ಟಾಪ್ ಸೆಂಟರ್, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್-ಕೊಪ್ಪಳ, ಸ್ಪೂರ್ತಿ ಕಲೆಕ್ಟಿವ್ ಗ್ರೂಪ್, ಮಕ್ಕಳ ಪ್ರಾಯೋಗಿಕ ಕಲಿಕಾ ಭೇಟಿ.ಹನುಮನಟ್ಟಿ, ಇರಕಲ್ಲಗಡ ಗ್ರಾಮ ಪಂಚಾಯಿತಿ, ನಿತ್ಯ ಕರ್ನಾಟಕ ದಿನ ಪತ್ರಿಕೆ ಸಹಯೋಗದಲ್ಲಿ ಮನುಕುಲದ ಮಹಾ ಸನ್ನದು-ಮಾನವ ಹಕ್ಕುಗಳ ಘೋಷಣೆಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಕೀಲ ಕೃಷ್ಣ ಈಳಗೇರ ಮುಂದುವರೆದು ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ 21 ವರ್ಷದ ಒಳಗಿನ ಗಂಡು ಹಾಗೂ 18 ವರ್ಷದ ಒಳಗಿನ ಹೆಣ್ಣಿನ ನಡುವೆ ನಡೆಯುವ ಮದುವೆ ಅಥವಾ ಹೆಣ್ಣು ಅಥವಾ ಗಂಡಿನ ನಡುವೆ ಒಬ್ಬರ ನಿಗದಿತ ವಯಸ್ಸು ಕಡಿಮೆ ಇದ್ದರೆ ಇಂಥವರ ನಡುವೆ ನಡೆಯುವ ಮದುವೆಯನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುತ್ತದೆ. 2018 ರಿಂದ ಕರ್ನಾಟಕದಲ್ಲಿ ನೆರವೇರಿಸಲಾದ ಪ್ರತಿಯೊಂದು ಬಾಲ್ಯ ವಿವಾಹವು ಅನ್ನೋರ್ಜಿತವಾಗತಕ್ಕದ್ದು. ಅಂದರೆ ಬಾಲ್ಯವಿವಾಹ ಮಾಡಿದ ಹೆಣ್ಣು ಮತ್ತು ಗಂಡಿನ ಕುಟುಂಬಸ್ಥರು. ಬಂಧು ಬಾಂಧವರು. ಪೂಜಾರಿಗಳು. ಮುದ್ರಣಕಾರರು. ಶಾಮೀಯಾನ ಹಾಕಿದವರು ಊಟ ಮಾಡಿದವರು ಎಲ್ಲರ ಮೇಲೂ ಪ್ರಕರಣ ದಾಖಲಿಸಬಹುದಾಗಿದೆ. ಇಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಇದರ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳಬೇಕು ಎಂದರು.
ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯಲ್ಲಿ ಡಿಸೆಂಬರ್ 10. ಮಾನವ ಹಕ್ಕುಗಳ ರಕ್ಷಣೆ ಮತ್ತು ಜಾರಿಗಾಗಿ ಎಲ್ಲಾ ಸದಸ್ಯ ರಾಷ್ಟ್ರಗಳು ಕಾನೂನು ಬದ್ಧವಾಗಿ ಅನುಷ್ಠಾನಗೊಳಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಗೌರವದಿಂದ ಬದುಕಲು ಮತ್ತು ಅವನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಅಗತ್ಯವಾದ ಮಾನವ ಘನತೆಯ ಹಕ್ಕುಗಳನ್ನು ಎಲ್ಲರಿಗೂ ದೊರೆಯುವಂತೆ ಜಾರಿಗೊಳಿಸುವುದಾಗಿದೆ.
ಅದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಸೌಕರ್ಯಗಳನ್ನು.ಧಾರ್ಮಿಕ ಸ್ವಾತಂತ್ರ್ಯದೊಂದಿಗೆ ರಾಷ್ಟ್ರೀಯತೆ. ಆರ್ಥಿಕ ಮತ್ತು ಸಾಮಾಜಿಕ ಸುರಕ್ಷತೆ ಎಲ್ಲವನ್ನು ಕಾನೂನಿನಡಿ ಒದಗಿಸುವುದಾಗಿರುತ್ತದೆ ಎಂದು ಹೇಳಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಡಾ. ಬಿ. ಅರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ಬರೆಯಲು ಸಾಧ್ಯವಾದ ಅಸ್ತ್ರವೆ ಶಿಕ್ಷಣ. ಹಾಗೆಯೆ ವಿದ್ಯಾರ್ಥಿನಿರಾದ ನೀವುಗಳು ಕೂಡ ಶೈಕ್ಷಣಿಕ ಕಲಿಕೆಯಿಂದಲೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಸಂವಿಧಾನದ ಆರ್ಟಿಕಲ್ 19 (2)ರಲ್ಲಿ ಹೇಳಿದಂತೆ ವಿದ್ಯಾರ್ಥಿಗಳು ಭಯವಿಲ್ಲದಂತೆ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಇನ್ನೊಬ್ಬರಿಗೆ ಕೆಣಕಲು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸುವಂತಿಲ್ಲ. ಪ್ರಬಂಧ. ಚಿತ್ರ ಕಲೆ ಕಂಪ್ಯೂಟರ್ ಮತ್ತು ವಿವಿಧ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇದೆ. ವಿದ್ಯಾರ್ಥಿಗಳು ವರ್ಗಗಳಲ್ಲಿ ಶಿಕ್ಷಕರಿಗೆ ಕೇಳಿ ತಿಳಿದುಕೊಳ್ಳುವುದರಿಂದ ತಾವು ಬರೆದುಕೊಳ್ಳುವದನ್ನು ಅರ್ಥ ಮಾಡಿಕೊಂಡು.ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಉತ್ತೀರ್ಣರಾಗಬಹುದು. ಮುಗ್ಧತೆಯಿದ್ದರೆ ಸಮಾಜದಲ್ಲಿ ಕಷ್ಟಗಳೇ ಹೆಚ್ಚು.ಹಕ್ಕುಗಳನ್ನು ತಿಳಿದುಕೊಂಡು ಬದುಕಿದರೆ ನೆಮ್ಮದಿಯಾಗಿ ಜೀವಿಸಬಹುದು ಎಂದು ಹೇಳಿದರು.
ಸಖಿ ಒನ್ ಸ್ಟಾಪ್ ಸೆಂಟರಿನ ಅಡಳಿತ ಅಧಿಕಾರಿ ಯಮುನಾ ಬೆಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಖಿ ಘಟಕದಿಂದ ಉಚಿತ ವೈದ್ಯಕೀಯ ನೆರವು. ಕಾನೂನು ನೆರವು.ಆಪ್ತ ಸಮಾಲೋಚನೆ. ತಾತ್ಕಾಲಿಕ ವಸತಿ ಮತ್ತು ಪೊಲೀಸ್ ನೆರವಿನೊಂದಿಗೆ ಸಂಕಷ್ಟದಲ್ಲಿರುವ ಮಕ್ಕಳ ಮತ್ತು ಮಹಿಳೆಯರ ಸೇವೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ.ಗಂಡು – ಹೆಣ್ಣುಗಳ ನಡುವೆ ಅಸಮಾನತೆ ಮತ್ತು ಭೇದ ಭಾವಗಳು ಜೈವಿಕ ಹುಟ್ಟಿನಿಂದ ಬಂದಿಲ್ಲ. ಇದರ ಬೌದ್ಧಿಕ ಉನ್ನತ್ತಿ ಮತ್ತು ಸ್ವಾಸ್ತ್ಯ ಸಾಮಾಜಿಕ ಸಬಲತೆಯನ್ನು ಕಾಣಬೇಕಾದರೆ ಸಮುದಾಯದಲ್ಲಿ. ಕುಟುಂಬದಲ್ಲಿ ಗಂಡು ಹೆಚ್ಚು ಹೆಣ್ಣು ಕಡಿಮೆ ಎನ್ನುವ ಲಿಂಗಾಧಾರಿತ ಅಸಮಾನತೆ. ದೌರ್ಜನ್ಯಗಳಿಗೆ ತಡೆಯಾಗಬೇಕು.ಮಹಿಳೆ ಹೊಲ ಮತ್ತು ಮನೆಯಲ್ಲಿ ದುಡಿದಿರುತ್ತಾಳೆ. ಅವಳೆ ಒಂದೊಂದು ರೊಟ್ಟಿ ಜಾಸ್ತಿ ತಿನ್ನಲಿ ಎನ್ನುವಂತಹ ಲಿಂಗ ಸಂವೇದನೆ ಅಭಿಶಿಕ್ಷಣವನ್ನು ಹೊಂದವಂತಾಗಬೇಕೆಂದು ತಿಳಿಸಿದರು.
ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಏಳುಬಾವಿ ಮಾತನಾಡಿ ನನ್ನ ದೇಹದ ಸುರಕ್ಷತೆ ನನ್ನ ಹೊಣೆ. ಯಾರಾದರೂ ನನ್ನ ದೇಹದ ಭಾಗಗಳನ್ನು ಅತಿಕ್ರಮಿಸಿ ಮುಟ್ಟಿದರೆ ಅದನ್ನು ತಡೆಯುವುದು ಹಾಗೂ ತಾಯಿಗೆ ಮತ್ತು ಶಿಕ್ಷಕರಿಗೆ ಮಕ್ಕಳ ಸಹಾಯವಾಣಿ 1098.ತುರ್ತು ಪೊಲೀಸ್ ಸಹಾಯವಾಣಿ 112. ಮಹಿಳಾ ಸಹಾಯವಾಣಿ 181 ಸಂಖ್ಯೆಗೆ ಕರೆಮಾಡಿ.ಬೇಡವೆನಿಸಿದರೆ ನೇರವಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಘಟಕಕ್ಕೆ ಬರಬಹುದು.ಮಕ್ಕಳ ಹಕ್ಕುಗಳು.ಮಕ್ಕಳ ಸುರಕ್ಷತೆ. ಬಾಲ್ಯ ವಿವಾಹ ತಡೆ. ಪೋಕ್ಸೋ ಕಾಯ್ದೆ. ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶವನ್ನು ಸೂಕ್ಮವಾಗಿ ಮನವರಿಕೆ ಮಾಡಿಕೊಳ್ಳಿ.ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಕಣ್ವಿ ವಕೀಲರು, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಜ್ಯೋತಿ ಕುಂಬಾರ, ಅಸ್ಮಾ ಬೇಗಂ ಮುಜಾವರ್, ನೇತ್ರಾವತಿ ಸಂಗನಾಳ ಮತ್ತು ಇರಕಲ್ಲಗಡ ಗ್ರಾಮ, ಹನುಮನಾಳ ಗ್ರಾಮ, ಮೆತಗಲ್, ತಾಳ ಕನಕಾಪುರ ಮುಂತಾದ ಗ್ರಾಮಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟಿನ ಜ್ಯೋತಿ ಕುಂಬಾರ ಸ್ವಾಗತಿಸಿದರು. ಸಖಿ ಘಟಕದ ಸಮಾಜಿಕ ಕಾರ್ಯಕರ್ತೆ ಹುಲಿಗೆಮ್ಮ ನಿರೂಪಿಸಿದರು.