i
ಮಾದಿಗರ ಶಕ್ತಿ ಪ್ರದರ್ಶನ, ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಮಾದಿಗ, ಸಮಗಾರ, ಮೋಚಿ, ಡೋರ್, ಡಕ್ಕಲಿಗ, ಬಂಗಿ ಇತ್ಯಾದಿ ಮಾದಿಗ ಸಂಬಂಧಿತ ಬಂಧುಗಳೆ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶವನ್ನು ಡಿಸೆಂಬರ್-18ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಾದಿಗ ಸಂಬಂಧಿತ ಜಾತಿಗಳ ಪ್ರಮುಖರು, ಯುವಕರು, ಚಿಂತಕರು, ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು, ಭಾಗವಹಿಸಿಸುತ್ತಿದ್ದು ವಿವಿಧ ಸಂಘ ಸಂಸ್ಥೆ ಮುಖಂಡರು ವಿವಿಧ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಎಲ್ಲ ಕಾರ್ಯಕರ್ತರು ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಹಟ್ಟಿ, ಗ್ರಾಮಗಳ ಮನೆ ಮನೆಯ ಬಂಧುಗಳು, ಸ್ನೇಹಿತರು, ಹಿತೈಷಿಗಳು ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶದಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶದಲ್ಲಿ ಅತಿ ಮುಖ್ಯವಾಗಿ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನ, ಒಳ ಮೀಸಲಾತಿ ಶಿಫಾರಸ್ಸಿನ ನಂತರದ ಬೆಳವಣಿಗೆಗಳ ಚರ್ಚೆಯಾಗುವ ವಿಷಯಗಳನ್ನು ಪ್ರತಿಯೊಬ್ಬ ಮಾದಿಗ ಸಮುದಾಯದವರು ಅರಿತುಕೊಳ್ಳೋಕು. ಇದು ತುಂಬಾ ಮಹತ್ವ ಪಡೆಯುವ ಈ ಸಮಾವೇಶದಲ್ಲಿ ಜಿಲ್ಲೆಯ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸಂಘಟಕರ ಪರವಾಗಿ ಪರಶುರಾಮ ಮುದ್ದಾಪುರ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8892604340 ಸಂಪರ್ಕಿಸಬಹುದಾಗಿದೆ.