i
ಗಣಿ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅರಣ್ಯ, ಜೀವಿಶಾಸ್ತ್ರ, ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಭಾನುವಾರ ಚಿತ್ರದುರ್ಗ ಜಿಲ್ಲೆಯ ತನಿಗೆಹಳ್ಳಿ, ಮೇಗಲಹಳ್ಳಿ ಪ್ರದೇಶದ ಜೆ ಎಸ್ ಡಬ್ಲ್ಯೂ, ವೇದಾಂತಾ, ಪಿ ಸಿ ಮೊದಲಾದ ಗಣಿ ಪ್ರದೇಶಗಳಿಗೆ ತೆರಳಿ ಪರಿಸರ ಸಂರಕ್ಷಣೆಗೆ ಕೈಗೊಂಡಿರುವ ಕ್ರಮ ಹಾಗೂ ವೆ ಬ್ರಿಡ್ಜ್ ಗಳಲ್ಲಿ ಎಷ್ಟು ಪ್ರಮಾಣದ ಅದಿರು ರವಾನೆಯಾಗುತ್ತಿದೆ ಎಂಬ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ, ವಾಯುಗುಣಮಟ್ಟಕ್ಕೆ ಹಾನಿ ಆಗದಂತೆ ದೂಳು ಹೇಳದಂತೆ ಲಾರಿ ಸಂಚರಿಸಿವ ರಸ್ತೆಗೆ ನಿತ್ಯ ನೀರು ಹಾಕುವಂತೆ ಸೂಚಿಸಿದರು. ಅಲ್ಲದೆ ಅಧಿಕಾರಿಗಳು ಅರಣ್ಯ ಪ್ರದೇಶಕ್ಕೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು, ಪರಿಸರ ಸಂರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರು ಸೂಚಿಸಿದರು.